ರಂಭಾಪುರಿ ಪೀಠದ ಮಹಾದ್ವಾರ, ಭದ್ರಕಾಳಿ ಮಂದಿರದ ಶಿಲಾನ್ಯಾಸ

ಬಾಳೆಹೊನ್ನೂರು, ಜೂ.20- ಬಾಳೆಹೊನ್ನೂರಿನಿಂದ ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಹೋಗುವ ಸ್ಥಳದಲ್ಲಿ ಮಹಾದ್ವಾರ ಹಾಗೂ ಭದ್ರಕಾಳಿ ಮಂದಿರಕ್ಕೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಇಂದು ಶಿಲಾನ್ಯಾಸ ನೆರವೇರಿತು.

ಸುಂದರ ವಿನ್ಯಾಸದ ಮಹಾದ್ವಾರಕ್ಕೆ ಶಾಸಕ ಟಿ.ಡಿ. ರಾಜೇಗೌಡರು ಶಿಲಾನ್ಯಾಸ ನೆರವೇರಿಸಿದರು. ಇದೇ ಸಂದರ್ಭದಲ್ಲಿ ರಂಭಾಪುರಿ ಪೀಠದ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಬಲಭಾಗದಲ್ಲಿ ಭದ್ರಕಾಳಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

error: Content is protected !!