ದಾವಣಗೆರೆ, ಜೂ.20- ಭಾರತ ಮತ್ತು ಚೀನಾ ಗಡಿಯಲ್ಲಿ ವೀರ ಮರಣ ಹೊಂದಿದ ಭಾರತೀಯ ಸೈನಿಕರಿಗೆ ಉಮ್ಮತ್ ಚಿಂತಕರ ವೇದಿಕೆಯ ಪದಾಧಿಕಾರಿಗಳು ಹಾಗೂ ಪ್ರಗತಿಪರ ಚಿಂತಕರು ಸೇರಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಇಂದು ಸಂಜೆ ಹುತಾತ್ಮ ವೀರ ಯೋಧರಿಗೆ ಮೇಣದ ಬತ್ತಿ ಬೆಳಕು ಮೂಡಿಸುವ ಮೂಲಕ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಿದರು.
ಚೀನಾದ ಸೈನಿಕರು ಗಾಲ್ವನ್ ಕಣಿವೆಯಲ್ಲಿ ಕಾಲು ಕೆರೆದು ಜಗಳ ಮಾಡಿ ನಮ್ಮ ದೇಶದ ಅಮೂಲ್ಯವಾದ 20 ವೀರ ಯೋಧರನ್ನು ಕೊಂದು ಹಾಕಿರುವುದು ಖಂಡನೀಯ. ಸರ್ಕಾರವು ಹುತಾತ್ಮ ಸೈನಿಕರ ಕುಟುಂಬದವರಿಗೆ ಸೂಕ್ತ ಪರಿಹಾರವನ್ನು ತಕ್ಷಣವೇ ಮಂಜೂರು ಮಾಡಬೇಕು ಮತ್ತು ಕುಟುಂಬ ವರ್ಗದವರಿಗೆ ಸರ್ಕಾರಿ ನೌಕರಿಯನ್ನು ನೀಡಿ ಆರ್ಥಿಕ ಭದ್ರತೆ ನೀಡಬೇಕು ಎಂದು ವೇದಿಕೆ ಅಧ್ಯಕ್ಷ ಅನೀಸ್ ಪಾಶ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ವಕೀಲರುಗಳಾದ ದುರುಗೇಶ್, ಅಬ್ದುಲ್ ಸಮದ್, ಸಿರಾಜುದ್ದೀನ್, ಹನೀಫ್ ಸಾಬ್, ಬಾಷ ಸಾಬ್, ಕತ್ತಲಗೆರೆ ತಿಪ್ಪಣ್ಣ, ಅಯಾಜ್ ಹುಸೇನ್, ಜಮೀರ್ ಪರ್ವೀನ್, ಜಬಿನಾ ಖಾನಮ್, ಇರ್ಫಾನ್, ಮುಸ್ತಾಫಾ ಇದ್ದರು.