ಪಂಚಾಯತ್ ರಾಜ್ ಇಂಜಿನಿಯರಿಂಗ್ ದಾವಣಗೆರೆ ವೃತ್ತದ ನಿಬಂಧಕ ಸದಾನಂದ ಬದ್ದಿ ನಿವೃತ್ತಿ – ಬೀಳ್ಕೊಡುಗೆ

ದಾವಣಗೆರೆ, ಜೂ.12- ಪಂಚಾಯತ್ ರಾಜ್ ಇಂಜಿನಿಯರಿಂಗ್ ದಾವಣಗೆರೆ ವೃತ್ತದ ನಿಬಂಧಕ ಎಲ್‌. ಸದಾನಂದ  ಬದ್ದಿ ಅವರು ಕಳೆದ ವಾರ ಸೇವೆಯಿಂದ ನಿವೃತ್ತರಾಗಿದ್ದು, ಕಛೇರಿಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಆತ್ಮೀಯವಾಗಿ ಸನ್ಮಾನಿಸುವುದರ ಮೂಲಕ ಬೀಳ್ಕೊಟ್ಟರು. ಇದೇ ಸಂದರ್ಭದಲ್ಲಿ ಅವರ ಕುಟುಂಬ ವರ್ಗದಿಂದಲೂ ಸತ್ಕರಿಸಲಾಯಿತು. ಸದಾನಂದ ಅವರು ದಾವಣಗೆರೆ ಪಂಚಾಯತ್‌ ರಾಜ್ ಇಂಜಿನಿಯರಿಂಗ್ ವಿಭಾಗ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಛೇರಿಯಲ್ಲಿ  ಕಾರ್ಯ ನಿರ್ವಹಿಸಿದ್ದಾರೆ.

error: Content is protected !!