ಹರಿಹರದಲ್ಲಿ ಪರಿಸರ ದಿನಾಚರಣೆ

ಹರಿಹರ, ಜೂ.12- ಪಟ್ಟಣದ ಡಿ. ನಾಗರಾಜಪ್ಪ ಬಡಾವಣೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು. ನಗರಸಭೆ ಸದಸ್ಯರಾದ ಶಂಕರ್ ಖಟಾವ್‌ಕರ್, ಪಾರ್ವತಮ್ಮ, ಅಶ್ವಿನಿ, ಪೌರಾಯುಕ್ತರಾದ ಎಸ್. ಲಕ್ಷ್ಮಿ, ಸಿಪಿಐ ಶಿವಪ್ರಸಾದ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯರಾದ ಡಿ. ಕುಮಾರ್, ಎಚ್.ಎಚ್. ಬಸವರಾಜ್ ಹಾಗೂ ಸ್ಥಳೀಯರು ಇದ್ದರು.

error: Content is protected !!