ರಸ್ತೆ ಅಪಘಾತದಲ್ಲಿ ತಂದೆ-ಮಗ ಸೇರಿ ಮೂವರು ಕಟ್ಟಡ ಕಾರ್ಮಿಕರ ಸಾವು

ದಾವಣಗೆರೆ, ಜೂ.11- ಅಪರಿಚಿತ ವಾಹನ ಡಿಕ್ಕಿಪಡಿಸಿದ ಪರಿಣಾಮ ತಂದೆ ಮತ್ತು ಮಗ ಸೇರಿ ಮೂವರು ಕಟ್ಟಡ ನಿರ್ಮಾಣ ಕಾರ್ಮಿಕರು ಮೃತ ಪಟ್ಟಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ರೊಪ್ಪದಹಟ್ಟಿ ಗ್ರಾಮದ ಗೇಟ್ ಬಳಿ ರಾಜ್ಯ ಹೆದ್ದಾರಿ-76ರ ರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಚನ್ನಗಿರಿ ತಾಲ್ಲೂಕು ಹಟ್ಟಿ ಗ್ರಾಮದ ಮಹಮ್ಮದ್ ಸೈಫುಲ್ಲಾ (40), ಹಿದಾಯತ್ ವುಲ್ಲಾ (20) ಇಬ್ಬರೂ ತಂದೆ-ಮಗನಾಗಿದ್ದು, ಗ್ರಾಮದ ದೇವರಹಳ್ಳಿ ರಂಗಪ್ಪ (40) ಮೃತರು. 

ಮೃತ ಮಹಮ್ಮದ್ ಸೈಫುಲ್ಲಾ ಅವರ ಮತ್ತೋರ್ವ ಮಗ ಜುಲ್ಫಿಕರ್ ಅಲಿ, ಹಿದಾಯತ್ ವುಲ್ಲಾ, ರಂಗಪ್ಪ ಈ ನಾಲ್ವರು ಸಹ ತರೀಕೆರೆ ತಾಲ್ಲೂಕು ವಿಠಲಾಪುರ ಗ್ರಾಮದಲ್ಲಿ ಮನೆ ಕಟ್ಟಲು ಗುತ್ತಿಗೆ ಪಡೆದಿದ್ದು, ಗಾರೆ ಕೆಲಸಕ್ಕೆ ಹೋಗಿ ಕೆಲ ಮುಗಿಸಿ ವಿಠಲಾಪುರ ಗ್ರಾಮದಿಂದ ಹೊರಟು ಹಟ್ಟಿ ಗ್ರಾಮಕ್ಕೆ ಎರಡು ಬೈಕ್ ಗಳಲ್ಲಿ ಬರುತ್ತಿದ್ದರು.

ತಂದೆ-ಮಗನಾದ ಮಹಮ್ಮದ್ ಸೈಫುಲ್ಲಾ, ಹಿದಾಯತ್ ವುಲ್ಲಾ ಒಂದು ಬೈಕ್ ನಲ್ಲಿ ಬರುತ್ತಿ ದ್ದರು. ಜುಲ್ಫಿಕರ್ ಅಲಿ ತನ್ನ ಬೈಕ್ ಹಿಂಬದಿ ಸವಾರ ರಂಗಪ್ಪನನ್ನು ಇಳಿಸಿ ಪೆಟ್ರೋಲ್ ಹಾಕಿ ಸಲು ತೆರಳಿದ್ದು, ವಾಪಸ್ ಬರುವುದರೊಳಗಾಗಿ ಈ ಮೂವರ ಮೇಲೆ ಅಪರಿಚಿತ ವಾಹನ ಡಿಕ್ಕಿ ಪಡಿಸಿದ್ದು, ಹಿದಾಯತ್ ವುಲ್ಲಾ, ರಂಗಪ್ಪ ಸ್ಥಳ ದಲ್ಲೇ ಮೃತಪಟ್ಟರೆ, ಮಹಮ್ಮದ್ ಸೈಫುಲ್ಲಾ ಆಸ್ಪ ತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. 

error: Content is protected !!