ಈ ನೆಲದ ಮೊದಲ ಮಗ

ನೆಲದ ಮಿಡಿತ ಅರಿತ ಜೀವ
ಮಳೆಯ ತಾನ ಬಲ್ಲ ವಿದುಷಿ
ಅನ್ನದಗುಳ ಬೆಲೆಯ
ಮನದಲಿಟ್ಟ ಮಾನವ
ಹಸಿವಿಗೊಂದು ಅಂತ್ಯ ಕಾಣಿಸಿದವ
ನೆರೆಯವರಿಗೆ ನೆರವಾಗುವ ನೇಹಿ
ಎಲ್ಲರನು ಬಾಚಿ ತಬ್ಬುವ
ಮಾತೃ ಭಾವದವ
ಜಗಕೆ ಎದೆ ತುಂಬ ಪ್ರೀತಿ ಇತ್ತವನು
ಇವನೆ ನನ್ನ ರೈತ, ಕೃಷಿಕ
ಈ ನೆಲದ ಮೊದಲ ಮಗ…


ಎಂ.ಎಸ್.ಮಲ್ಲಿಕಾರ್ಜುನಯ್ಯ
ಪ್ರಾಂಶುಪಾಲರು, ಬೆಳವನೂರು

error: Content is protected !!