ಜಿ.ಎಂ. ಸಮೂಹ ಸಂಸ್ಥೆ ಉದ್ಯೋಗಿಗಳಿಂದ ಕೋವಿಡ್-19 ನಿಧಿಗೆ ದೇಣಿಗೆ

ದಾವಣಗೆರೆ, ಜೂ.6- ಶ್ರೀ ಶೈಲ ವಿದ್ಯಾಸಂಸ್ಥೆ ಅಡಿಯಲ್ಲಿ ಬರುವ ಜಿ.ಎಂ. ತಾಂತ್ರಿಕ ಮಹಾ ವಿದ್ಯಾಲಯ, ಜಿ.ಎಂ. ಹಾಲಮ್ಮ ಪ.ಪೂ.ಕಾಲೇಜು ಹಾಗೂ ಪ್ರೌಢಶಾಲೆ, ಜಿ.ಎಂ.ಎಸ್. ಅಕಾಡೆಮಿ, ಜಿ.ಎಂ. ಔಷಧೀಯ ವಿಜ್ಞಾನ ಕಾಲೇಜು, ಜಿ.ಎಂ. ಪಾಲಿಟೆಕ್ನಿಕ್ ಇವುಗಳ ಉದ್ಯೋಗಿಗಳೆಲ್ಲರೂ ಸೇರಿ ತಮ್ಮ ಒಂದು ದಿನದ ವೇತನವನ್ನು ಕೋವಿಡ್-19 ಪರಿಹಾರ ನಿಧಿಗೆ ದೇಣಿಗೆ ನೀಡಿದರು.

ಜಿಎಂಐಟಿ ಕಾಲೇಜು ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಅವರು 2,53,670 ಮೊತ್ತದ ಚೆಕ್ಕನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಪ್ಪ, ಜಿ.ಎಂ. ಸಮೂಹ ಸಂಸ್ಥೆಗಳ ನಿರ್ವಹಣಾ ಪ್ರತಿನಿಧಿ ವೈ.ಯು. ಸುಭಾಶ್ ಚಂದ್ರ, ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಎಚ್.ಎಸ್. ಗೋವರ್ಧನ್ ಸ್ವಾಮಿ, ಸಿಎಸ್‌ಇ ವಿಭಾಗದ ಮುಖ್ಯಸ್ಥ ಡಾ.ಎಂ.ಬಿ. ಸಂಜಯ್ ಪಾಂಡೆ ಹಾಗೂ ಆಡಳಿತ ಸಿಬ್ಬಂದಿ ಎಂ.ಎಸ್. ರವಿಶಂಕರ್ ಉಪಸ್ಥಿತರಿದ್ದರು.

error: Content is protected !!