ಜನೌಷಧಿ ಕೇಂದ್ರಗಳ ಸಮಯ ಬದಲಿಸಿ

ಮಾನ್ಯರೇ,

ನಗರದಲ್ಲಿರುವ ಜನೌಷಧಿ ಕೇಂದ್ರಗಳ ಸಮಯವನ್ನು ಬೆಳಿಗ್ಗೆ 7 ರಿಂದ 9 ಹಾಗೂ ಸಂಜೆ 6 ರಿಂದ 9ಗಂಟೆವರೆಗೆ ತೆರೆಯಲು ಕ್ರಮ ಕೈಗೊಳ್ಳಿ. ಕಾರಣ ಬೆಳಿಗ್ಗೆ 7ಗಂಟೆಯಿಂದ ಅವಶ್ಯಕ ದಿನಸಿಗಳು, ಹಣ್ಣು, ತರಕಾರಿ ಮಾರಾಟ ನಡೆಯುತ್ತಿದ್ದು 9 ಗಂಟೆಗೆ ಮುಕ್ತಾಯವಾಗಲಿದೆ. ಇದೇ ವೇಳೆಗೆ ಜನೌಷಧಿ ಅಂಗಡಿಗಳು ತೆರೆದಿದ್ದಲ್ಲಿ ಗ್ರಾಹಕರಿಗೆ ಅನುಕೂಲವಾಗಲಿದೆ. ಮಧ್ಯಾಹ್ನ ಬಾಗಿಲು ಮುಚ್ಚಲಿ. ಮತ್ತೆ ಸಂಜೆ 6 ಕ್ಕೆ ತೆರೆದಲ್ಲಿ ಗ್ರಾಮೀಣ ಹಾಗೂ ನಗರವಾಸಿಗಳಿಗೆ ಅನುಕೂಲವಾಗಲಿದೆ.

– ರಘುನಾಥ ರಾವ್ ತಾಪ್ಸೆ, ದಾವಣಗೆರೆ.

error: Content is protected !!