ದಾವಣಗೆರೆ, ಮೇ 23- ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 10 ಸಾವಿರ ರೂ ಸಹಾಯಧನ ನೀಡಬೇಕು ಹಾಗೂ ಭಗತ್ಸಿಂಗ್ ಎಂಪ್ಲಾಯ್ಮೆಂಟ್ ಗ್ಯಾರೆಂಟಿ ಆಕ್ಟ್ ಜಾರಿಗೆ ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರ ಸಾರ್ವಜನಿಕ ಸಂಪತ್ತು, ಕಲ್ಲಿದ್ದಲು ಗಣಿ ಸಂಪತ್ತು, ಏರ್ಪೋರ್ಟ್, ಇಸ್ರೋ ಕಂಪನಿ, ಸಾರ್ವಜನಿಕ ಕೈಗಾರಿಕೆಗಳು, ಬಿಎಸ್ಸೆನ್ನೆಲ್ ಖಾಸಗೀಕರಣ ಮಾಡಲು ಹೊರಟಿರುವುದನ್ನು ಸಂಘಟನೆ ಖಂಡಿಸಿದೆ.
July 23, 2024