ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಾಣಿಕೆ : ಪೊಲೀಸರ ದಾಳಿ

ಹರಿಹರ, ಮೇ 24- ನಗರದ ಹೊರ ವಲಯ ದಲ್ಲಿರುವ ಹರ್ಲಾಪುರ ಬಳಿ  ತುಂಗಭದ್ರಾ ನದಿ ಯಿಂದ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು 4 ಲಾರಿಗಳಲ್ಲಿ ಸಾಗಿಸುತ್ತಿದ್ದಾಗ ಮರಳಿನ ವಾಹನವನ್ನು ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, 32 ಸಾವಿರ ಮೌಲ್ಯದ ಮರಳು ಸಹಿತ ಲಾರಿ ಮತ್ತು ಅವುಗಳ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.

ಹಳೆ ಹರ್ಲಾಪುರ ಬಳಿ ತುಂಗಭದ್ರಾ ನದಿಯಲ್ಲಿ ರಾತ್ರಿ ಎರಡು ಗಂಟೆಯ ಸುಮಾರಿಗೆ ನಾಲ್ಕು ಮಜ್ಡಾ ವಾಹನಗಳಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವುದನ್ನು ತಡೆದು ಲಾರಿಗಳ ಚಾಲಕರುಗಳಾದ ದೀಟೂರು ಗ್ರಾಮದ ಹನುಮಂತಪ್ಪ, ಶಿವರಾಜ, ಹಳೆಹರ್ಲಾಪುರ ಗ್ರಾಮದ ರಾಜರೆಡ್ಡಿ, ಮಹೇಶ್ ಅವರುಗಳನ್ನು ಬಂಧಿಸಿ ಅವರಿಂದ  4 ಮಜ್ಡಾ ವಾಹನ ತಲಾ 8 ಸಾವಿರ ಮೌಲ್ಯದ ಮರಳು ಲೋಡ್‌ಗಳನ್ನು ವಶಕ್ಕೆ ಪಡೆದುಕೊಂಡು ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.  ಈ ಪ್ರಕರಣವು ಗುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ವೇಳೆ ಎಎಸ್‌ಐ ಕರಿಬಸಪ್ಪ, ವೆಂಕಟೇಶ್ ರೆಡ್ಡಿ ಇತರರು ಹಾಜರಿದ್ದರು.

error: Content is protected !!