ಹರಿಹರ, ಏ. 25- ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ಜನ್ಮ ದಿನೋತ್ಸವದ ಅಂಗವಾಗಿ ಬಡ ಕುಟುಂಬಗಳಿಗೆ ಆಹಾರ ದಾನ್ಯಗಳ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಧರ್ಮದರ್ಶಿ ಪಿ.ಡಿ.ಶಿರೂರ, ಸಮಾಜದ ಹಿರಿಯ ಎನ್.ಜಿ.ನಾಗನಗೌಡರು, ಹರಿಹರ ತಾಲ್ಲೂಕಿನ ಅಧ್ಯಕ್ಷ ಗುಳದಹಳ್ಳಿ ಶೇಖರಪ್ಪ, ಭಾನುವಳ್ಳಿ ಚನ್ನಬಸಪ್ಪ, ದಾಸೋಹ ಸಮಿತಿಯ ಅಧ್ಯಕ್ಷ ಷಣ್ಮುಖಪ್ಪ, ತಾಲ್ಲೂಕು ಪಂಚಾಯತಿ ಸದಸ್ಯ ಮಹಾಂತೇಶ, ಉದ್ಯಮಿ ಮಹೇಶ ಹಾವೇರಿ, ಧರ್ಮದರ್ಶಿ ಚಂದ್ರಶೇಖರ ಪೂಜಾರ, ಹುಲ್ಲತ್ತಿ ಬಸವರಾಜ, ಅನಿಲ ಸಿದ್ದಾಳಿ, ರಾಜ್ಯ ಯುವ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಕರಿಬಸಪ್ಪ ಗುತ್ತೂರು, ಯುವ ಘಟಕದ ಕಾರ್ಯದರ್ಶಿ ಅಮೋಘ ಬಾದಾಮಿ ಹಾಗೂ ಶ್ರೀ ಪೀಠದ ಸಿಬ್ಬಂದಿ ಉಪಸ್ಥಿತರಿದ್ದರು.