ದಾವಣಗೆರೆ ಕ್ಲಬ್ ಏಳಿಗೆಗೆ ಶ್ರಮಿಸೋಣ

ಕ್ಲಬ್‌ನ ವಾರ್ಷಿಕ ಮಹಾಸಭೆಯಲ್ಲಿ ಎ.ಬಿ. ಚಂದ್ರಶೇಖರ್

ದಾವಣಗೆರೆ, ಡಿ.20- ನಗರದ ಪ್ರವಾಸಿ ಮಂದಿರ ಬಳಿ ಇರುವ ದಾವಣಗೆರೆ ಕ್ಲಬ್ ನ 2020-21ನೇ  ಸಾಲಿನ ವಾರ್ಷಿಕ ಮಹಾಸಭೆಯು ಕ್ಲಬ್ ನ ಆವರಣದಲ್ಲಿ ನಿನ್ನೆ   ನಡೆಯಿತು.

ಕ್ಲಬ್ ನ ಅಧ್ಯಕ್ಷ ಮತ್ತಿಹಳ್ಳಿ ವೀರಣ್ಣ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಎ.ಬಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಸಭೆ ಯಶಸ್ವಿಯಾಗಿ ನೆರವೇರಿಸಿದರು. 

ಕ್ಲಬ್ ಅಭಿವೃದ್ಧಿಗಾಗಿ ಕಾರ್ಯಕಾರಿ ಸಮಿತಿ ಉತ್ತಮ ಕಾರ್ಯ ಮಾಡುತ್ತಿದ್ದು, ಮುಂದೆಯೂ ಸಹ ಹೀಗೆಯೇ ಕಾರ್ಯಗಳ ಮುಖೇನ ಕ್ಲಬ್ ಏಳಿಗೆಗೆ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಕ್ಲಬ್ ಸದಸ್ಯರು ಸಲಹೆಯೊಂದಿಗೆ ಪ್ರೋತ್ಸಾಹ ನೀಡಿದರು.

ಸಭೆಯಲ್ಲಿ ಗೌರವ ಕಾರ್ಯದರ್ಶಿ ಪಲ್ಲಾಗಟ್ಟಿ ರವಿಶಂಕರ್, ಸಹ ಕಾರ್ಯದರ್ಶಿ ಎಸ್.ಜಿ. ಉಳುವಯ್ಯ, ಖಜಾಂಚಿ ವಾಲಿ ಲಿಂಗರಾಜ್, ನಿರ್ದೇಶಕರುಗಳಾದ ಬೆಳ್ಳೂಡಿ ಸದಾನಂದ್, ಹೆಚ್.ವಿ. ರುದ್ರೇಶ್, ಬೇತೂರು ಅಭಿಷೇಕ್, ಎಸ್.ಕೆ. ತಿಮ್ಮರಾಜ್ ಗುಪ್ತಾ, ಬಾದಾಮಿ ಮಲ್ಲಿಕಾರ್ಜುನ್, ಎಸ್.ಕೆ. ಪ್ರಶಾಂತ್ ಗುಪ್ತಾ, ಹಿರಿಯ ಸದಸ್ಯರುಗಳಾದ ಆನಗೋಡು ನಂಜುಂಡಪ್ಪ, ಎಸ್.ಕೆ. ವೀರಣ್ಣ, ಬಿ.ಹೆಚ್. ಪರಶುರಾಮಪ್ಪ, ಪರಮೇಶ್ವರ ಗೌಡ್ರು, ಬಾದಾಮಿ ಕರಿಬಸಪ್ಪ, ಮಲ್ಲಿನಾಥ್ ಪುರಾಣಿಕ್, ಕೆ.ಬಿ. ನಾಗರಾಜ್ ಸೇರಿದಂತೆ ಕ್ಲಬ್ ನ ಸದಸ್ಯರುಗಳು ಭಾಗವಹಿಸಿದ್ದರು. 

error: Content is protected !!