ಮುಖಂಡರು, ಕಾರ್ಯಕರ್ತರ ಶ್ರಮದಿಂದ ಗೆಲುವು

ಹರಿಹರದ ಬಿಜೆಪಿ ವಿಜಯೋತ್ಸವದಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್

ಹರಿಹರ, ಡಿ.14- ಬಿಜೆಪಿ ಮುಖಂಡರು, ಕಾರ್ಯಕರ್ತರು ಹಗಲು ರಾತ್ರಿ ಎನ್ನದೇ ಶ್ರಮವಹಿಸಿ, ಕೆಲಸವನ್ನು ಮಾಡಿದ್ದರ ಫಲವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಗೆಲ್ಲುವುದಕ್ಕೆ ಸಾಧ್ಯವಾಗಿದೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್ ಹೇಳಿದ್ದಾರೆ.

ಚಿತ್ರದುರ್ಗ – ದಾವಣಗೆರೆ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನವೀನ್ ಗೆದ್ದಿದ್ದರಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಚಾರಣೆ ನಂತರದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಇವತ್ತಿನ ಗೆಲುವು ಕ್ಷೇತ್ರದಲ್ಲಿ ಕಾರ್ಯ ಕರ್ತರ ಮತ್ತು ಮುಖಂಡರಿಗೆ ಇನ್ನಷ್ಟು ಪಕ್ಷ ವನ್ನು ಬಲವರ್ಧನೆ ಮಾಡುವುದಕ್ಕೆ ಉರುಪು – ಹುಮ್ಮಸ್ಸು ತರಿಸಿದೆ ಎಂದು ಹರೀಶ್ ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ನಗರಸಭೆ ಸದಸ್ಯ ಹನುಮಂತಪ್ಪ, ಮಾಜಿ ತಾ.ಪಂ. ಅಧ್ಯಕ್ಷರಾದ ಶ್ರೀದೇವಿ ಮಂಜುನಾಥ್, ಮಾಜಿ ನಗರಸಭೆ ಸದಸ್ಯೆ ಅಂಬುಜಾ ರಾಜೋಳ್ಳಿ, ಮುಖಂಡರಾದ ತುಳಜಪ್ಪ ಭೂತೆ, ಐರಣಿ ನಾಗರಾಜ್, ಹೆಚ್.ಮಂಜಾನಾಯ್ಕ್, ಪ್ರಮಿಳಾ ನಲ್ಲೂರು, ರೂಪಾ ಕಾಟ್ವೆ, ರವಿ ರಾಯ್ಕರ್, ಸುನಿಲ್, ಅಶೋಕ್‌ ಕುಂಬಳೂರು, ತಿಪ್ಪೇಶ್, ರಾಜು ಕೀರೋಜಿ, ಆಟೋ ರಾಜು, ಸುರೇಶ್ ತೆರೆದಾಳ್‌, ಕಿರಣ್ ಮೂಲಿಮನಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!