ಪರಿಷತ್ ಅಭ್ಯರ್ಥಿಗಳ ಗೆಲುವು : ಹರಪನಹಳ್ಳಿಯಲ್ಲಿ ವಿಜಯೋತ್ಸವ

ಹರಪನಹಳ್ಳಿ, ಡಿ.14 – ತಾಲ್ಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ ಉಚ್ಚಂಗಿದುರ್ಗದಲ್ಲಿ ಬಳ್ಳಾರಿ ಹಾಗೂ ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳಾದ ವೈ.ಎಂ. ಸತೀಶ್ ಹಾಗೂ ಕೆ.ಎಸ್. ನವೀನ್ ಅವರ ಅಭೂತಪೂರ್ವ ಗೆಲುವಿಗೆ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಬೇವಿನಹಳ್ಳಿ ಕೆಂಚನಗೌಡ್ರು, ಮುಖಂಡರಾದ ಎಸ್. ಹನುಮಂತಪ್ಪ, ಫಣಿಯಾಪುರ ಲಿಂಗರಾಜ್, ಜಯಣ್ಣ, ಯುವ ಮುಖಂಡ ಬಾಲೇನಹಳ್ಳಿ ಕೆಂಚನಗೌಡ್ರು, ಗ್ರಾ.ಪಂ. ಸದಸ್ಯರಾದ ಭರಮಣ್ಣ, ಕೆಂಚಪ್ಪ, ಯುವರಾಜ,ಕೋಟೆ ಕ್ಯಾಂಪ್ ಹಾಲೇಶ್, ಸಿದ್ದೇಶ್ ಹಡಪದ, ಉಮೇಶ, ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!