ಬಿಜೆಪಿ ಗೆಲುವು: ಜಗಳೂರಿನಲ್ಲಿ ವಿಜಯೋತ್ಸವ

ಜಗಳೂರು, ಡಿ.14- ಚಿತ್ರದುರ್ಗ – ದಾವಣಗೆರೆ ಕ್ಷೇತ್ರದ ವಿಧಾನ ಪರಿಷತ್ ಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಅವರ ಗೆಲುವಿಗೆ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಮಾತನಾಡಿ, ಸ್ಥಳೀಯ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳು ಬೆಂಬಲಿಸಿರುವುದು ಅಭಿನಂದನಾರ್ಹ. ಅಲ್ಲದೇ, ಶಾಸಕ ಎಸ್.ವಿ.ರಾಮಚಂದ್ರ ಅವರ ಚುನಾವಣೆ ಪ್ರಚಾರದ ವೇಳೆ ಸಲ್ಲಿಸಿದ ಅವಿರತ ಪ್ರಯತ್ನ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ನಿರಂತರ ಸಂಪರ್ಕ ಕ್ಷೇತ್ರದ ಅಭಿವೃದ್ದಿ ಕೆಲಸಗಳು ಜನಮತವನ್ನು ಗಳಿಸಿವೆ ಎಂದು ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ವಿ.ನಾಗರಾಜ್,  ಪ.ಪಂ ಉಪಾಧ್ಯಕ್ಷೆ ಮಂಜಮ್ಮ, ಮಾಜಿ ಅಧ್ಯಕ್ಷ ಆರ್.ತಿಪ್ಪೇಸ್ವಾಮಿ, ಸದಸ್ಯರಾದ ದೇವರಾಜ್, ಪಾಪಲಿಂಗಪ್ಪ, ಲುಕ್ಮಾನ್ ಖಾನ್, ನಾಮನಿರ್ದೇಶಿತ ಸದಸ್ಯರಾದ ಬಿ.ಪಿ.ಸುಬಾನ್, ರುದ್ರಮುನಿ, ಮುಖಂಡರಾದ, ವಕೀಲ ಹನುಮಂ ತಪ್ಪ, ರಮೇಶ್, ಓಬಳೇಶ್, ಮರೇನಹಳ್ಳಿ ನಾಗರಾಜ್, ವಿಜಿ, ಅಂಜಿನಪ್ಪ, ಗೌರಿಪುರ ಶಿವಣ್ಣ, ಯೋಗಾನಂದ, ಶಿವಕುಮಾರ್, ಮಂಜಣ್ಣ, ಮಹೇಶ್, ವೀರೇಶ್, ಕಾಂತರಾಜ್, ಮುಂತಾದವರು ಭಾಗವಹಿಸಿದ್ದರು.

error: Content is protected !!