ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಘಟಕದಿಂದ ಕಾರ್ತಿಕೋತ್ಸವ

ದಾವಣಗೆರೆ, ಡಿ.13- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಮಹಿಳಾ ನಗರ ಘಟಕದ ವತಿಯಿಂದ ನಗರದ ಶ್ರೀ ಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. 

ವೀರಶೈವ ಮಹಾ‌ಸಭಾದ ಜಿಲ್ಲಾ ಅಧ್ಯಕ್ಷರೂ, ದೂಡಾ ಅಧ್ಯಕ್ಷರೂ ಆದ  ದೇವರಮನೆ ಶಿವಕುಮಾರ್, ರಾಷ್ಟ್ರೀಯ ಯುವ ಘಟಕದ ಕಾರ್ಯಕಾರಿಣಿ ಸದಸ್ಯ, ಶಿವನಗೌಡ ಟಿ. ಪಾಟೀಲ್, ಜಿಲ್ಲಾ ಸಂಚಾಲಕ ಟಿಂಕರ್ ಮಂಜಣ್ಣ, ಕಾರ್ಯದರ್ಶಿ ಪ್ರಕಾಶ್ ಮಾಗಿ, ನಗರ ಘಟಕದ ಅಧ್ಯಕ್ಷರಾದ ಪುಷ್ಪ ವಾಲಿ, ಪ್ರಧಾನ ಕಾರ್ಯದರ್ಶಿ ಮಂಗಳ  ಕರಿಬಸಪ್ಪ, ಪದಾಧಿಕಾರಿಗಳಾದ  ಜ್ಯೋತಿ ದೊಡ್ಡಮನೆ, ಜಿಂ. ಮಂಜುಳ, ಲಕ್ಷ್ಮಿ, ಕವಿತಾ, ಸರ್ವಮಂಗಳಮ್ಮ, ಭಾಗ್ಯಮ್ಮ, ಕೊಟ್ರಮ್ಮ, ವನಿತಾ, ಸುಜಾತ, ಶಕುಂತಲಮ್ಮ, ದಾನೇಶ್ವರಿ, ರೇಖಾ ಕರಿಬಸಪ್ಪ, ಶೋಭಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!