ಕೆರೆಯ ಪಾಲಾಗಿದ್ದ ವ್ಯಕ್ತಿಯ ಶವ ಪತ್ತೆ

ದಾವಣಗೆರೆ, ನ.21- ಎಮ್ಮೆ ತೊಳೆಯಲು ಹೋಗಿ ಕೆರೆಯ ಪಾಲಾಗಿದ್ದ ವ್ಯಕ್ತಿಯೊಬ್ಬನ ಮೃತದೇಹ ಭಾನುವಾರ ಮಧ್ಯಾಹ್ನ ಪತ್ತೆಯಾಗಿದೆ.

ತಾಲೂಕಿನ ಹೆದ್ನೆ ಗ್ರಾಮದ ತಿಪ್ಪೇಸ್ವಾಮಿ (40) ಎಂಬುವರ  ಪತ್ತೆಯಾದ ಮೃತದೇಹ. ಕಳೆದ ಎರಡು ದಿನದ ಹಿಂದೆ ತಾಲ್ಲೂಕಿನ ರಾಂಪುರ ಗ್ರಾಮದ ಕೆರೆಯಲ್ಲಿ ಎಮ್ಮೆ ಮೈ ತೊಳೆಯಲು ಹೋದಾಗ ನೀರು ಪಾಲಾಗಿದ್ದರು. 

ಎರಡು ದಿನದಿಂದ ಗ್ರಾಮದ ಕೆಲವು ಈಜುಗಾರರು ಕೆರೆಯಲ್ಲಿ ಹುಡುಕಾಡಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಜಿ.ಪಂ. ಮಾಜಿ ಸದಸ್ಯ ಬಸವಂತಪ್ಪ ಹರಿಹರದ ನುರಿತ ಈಜುಗಾರರನ್ನು ಕರೆದೊಯ್ದು ಭಾನುವಾರ ಮೃತದೇಹವನ್ನು ಪತ್ತೆ ಹಚ್ಚಿಸಿದರು. ಬಳಿಕ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಕುರಿತು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!