ಬಿಜೆಪಿ ದಾವಣಗೆರೆ ವಿಭಾಗದ ಮಾಧ್ಯಮ ಮಂಥನ ಕಾರ್ಯಕ್ರಮ

ಚಿತ್ರದುರ್ಗ, ಮಾ.28- ಪಕ್ಷದಲ್ಲಿ ಮಾಧ್ಯಮ ವಿಭಾಗದ ಚಟುವಟಿಕೆಯನ್ನು ಚುರುಕು ಗೊಳಿಸಲು, ಪಕ್ಷದ ಕಾರ್ಯಚಟುವಟಿಕೆಗಳನ್ನು ಮಾಧ್ಯಮಗಳಿಗೆ ಯಶಸ್ವಿಯಾಗಿ ತಲುಪಿಸಲು ದಾವಣಗೆರೆ ವಿಭಾಗ ಮಟ್ಟದ (ದಾವಣಗೆರೆ, ತುಮಕೂರು, ಹಾಗೂ ಚಿತ್ರದುರ್ಗ) ಮಾಧ್ಯಮ ಮಂಥನ ಕಾರ್ಯಕ್ರಮವು ಇಂದು ಚಿತ್ರದುರ್ಗದಲ್ಲಿ ಅಮೋಘ ಇಂಟರ್‌ ನ್ಯಾಷನಲ್‌ ಹೋಟೆಲ್‌ನಲ್ಲಿ ಜರುಗಿತು. 

ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ  ಬಿಜೆಪಿ ವಕ್ತಾರ ಜಗ್ಗೇಶ್‌ ಉದ್ಘಾಟಿಸಿದರು. 

ಸಭೆಯಲ್ಲಿ ಇನ್ನೊಬ್ಬ ರಾಜ್ಯ ವಕ್ತಾರರಾದ ಶ್ರೀಮತಿ ತೇಜಸ್ವಿನಿ ಗೌಡ, ಚಿತ್ರದುರ್ಗ ಶಾಸಕ ಜಿ.ಹೆಚ್‌ ತಿಪ್ಪಾರೆಡ್ಡಿ, ವಿಭಾಗ ಸಂಘಟಕರು, ಪ್ರಧಾನ ಕಾರ್ಯದರ್ಶಿ ಜೇಷ್ಠ ಪಡಿವಾಳ್‌, ವಿಭಾಗ ಉಸ್ತುವಾರಿ ಜಿ.ಎಂ. ಸುರೇಶ್‌, ರಾಜ್ಯ ಮಾಧ್ಯಮದ ಸದಸ್ಯ ಅವಿನಾಶ್‌, ಪ್ರಶಾಂತ್, ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಮುರಳಿ, ನಗರಸಭಾ ಅಧ್ಯಕ್ಷ ಶ್ರೀಮತಿ ತಿಪ್ಪಮ್ಮ ವೆಂಕಟೇಶ್‌, ದಾವಣಗೆರೆ ಜಿಲ್ಲಾ ವಕ್ತಾರ ಡಿ.ಎಸ್.‌ ಶಿವಶಂಕರ್‌, ಸಹ ವಕ್ತಾರ ಮಹೇಶ್ವರ ನಾಯ್ಕ, ಜಿಲ್ಲಾ ಮಾಧ್ಯಮ ಸಂಚಾಲಕ ವಿಶ್ವಾಸ್‌ ಹೆಚ್.‌ಪಿ, ದಾ. ಉತ್ತರ ಮಂಡಲದ ಸಂಚಾಲಕ ನಾಗರಾಜ್‌ ಕೆ.ಪಿ, ದಾ.ದಕ್ಷಿಣ ಮಂಡಲದ ಸಂಚಾಲಕ ಹರೀಶ್‌ ಹೊನ್ನೂರು, ಮಾಯಕೊಂಡ ಮಂಡಲದ ಸಂಚಾಲಕ ಸಂತೋಷ್, ಹರಿಹರ ಗ್ರಾಮಾಂತರ ಮಂಡಲದ ಸಂಚಾಲಕ ಅರವಿಂದ್‌ ಬಣಕಾರ್‌, ಚನ್ನಗಿರಿ ಮಂಡಲದ ಸಂಚಾಲಕ ನರೇಂದ್ರ ಪನ್ನೆ ಸಮುದ್ರರವರು ಉಪಸ್ಥಿತರಿದ್ದರು.

error: Content is protected !!