ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒತ್ತಾಯ

ದಾವಣಗೆರೆ, ಆ. 8- ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಸಭೆಗೆ ಬೆಂಬಲ ವ್ಯಕ್ತಪಡಿಸಿ ನಗರದ ಜಯದೇವ ವೃತ್ತದಲ್ಲಿ ಏಕರೂಪ ನಾಗರಿಕ ಸಂಹಿತೆ ಸಮಿತಿ ಮತ್ತು ಲೈಫ್ ಲೈನ್ ಸಂಘಟನೆಯ ವತಿಯಿಂದ ಮೇಣದ ಬತ್ತಿ ಹಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ತಜ್ಞ ವೈದ್ಯರುಗಳಾದ ಡಾ. ನಾಗಪ್ಪ ಕಡ್ಲಿ, ಡಾ. ಗಣೇಶ್ ಇಡಗುಂಜಿ, ಡಾ.ವೆಂಕಟೇಶ್ ಗುಪ್ತ, ಡಾ ಸುಭೋದ್ ಶೆಟ್ಟಿ, ಡಾ. ಟಿ.ಜಿ.ರವಿಕುಮಾರ್, ಡಾ. ಹಾಲಸ್ವಾಮಿ ಕಂಬಾಳಿಮಠ್, ಡಾ. ಮಹೇಶ್, ಡಾ. ಹರ್ಷ, ಡಾ. ವಿರೂಪಾಕ್ಷ ಗೌಡ, ಡಾ. ಸುನಿಲ್, ಲೈಫ್ ಲೈನ್‌ನ ಶೇಷಾಚಲ, ಮಾಧವ ಪದಕಿ, ಗೋಪಾಲಕೃಷ್ಣ, ಪೃಥ್ವಿರಾಜ್ ಬಾದಾಮಿ, ಸಂತೋಷ, ಸಾಗರ್, ವಿನಯ್, ಮಾಧವಿ, ವಸಂತ ರಾಜ್ ಮತ್ತಿತರರು ಭಾಗವಹಿಸಿದ್ದರು.

error: Content is protected !!