ಕರುಣಾದಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ

ದಾವಣಗೆರೆ, ಮಾ. 25- ನಗರಕ್ಕೆ ವ್ಯಾಪಾರ ಮತ್ತು ಆಸ್ಪತ್ರೆಗೆ ಬಂದಂತಹ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾಗೂ ನಗರ ಜನತೆಗೆ  ಬಿಸಿಲಿನ ಬೇಗೆಗೆ ಬಳಲಿ, ನೀರಿನ ದಾಹ ತೀರಿಸಿಕೊಳ್ಳಲು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಮುಂದಾಗಿದೆ.

ಸಾರ್ವಜನಿಕರು ಓಡಾಡುವಂತಹ ಸ್ಥಳಗಳಲ್ಲಿ, ಅಂಗಡಿಗಳಲ್ಲಿ 20 ಲೀ. ವಾಟರ್ ಕ್ಯಾನ್‌ಗಳನ್ನು  ಇಡಲು ಟ್ರಸ್ಟ್ ನಿರ್ಧರಿಸಿದ್ದು, ಅಂಗಡಿಗಳ ಮುಂಭಾಗ ದಲ್ಲಿ ನೀರಿನ ಕ್ಯಾನ್‍ಗಳನ್ನು ಇಟ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಬಯಸುವವರು  ವಾಟರ್ ಕ್ಯಾನ್ ಟ್ರಸ್ಟ್‍ಗೆ ಬಂದು ಕ್ಯಾನ್ ತೆಗೆದುಕೊಳ್ಳಬಹುದು ಇಲ್ಲ ವಾದಲ್ಲಿ ವಿಳಾಸ ಕೊಟ್ಟರೆ ನಾವೇ ತಾವಿರುವ ಸ್ಥಳಗಳಿಗೆ ತಲುಪಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ. ಮಾಹಿತಿಗೆ ಲಿಂಗರಾಜು – 95380 24422, ಸದಾನಂದ- 6363151534 ಸಂಪರ್ಕಿಸಬಹುದಾಗಿದೆ.

error: Content is protected !!