ಮೈಲಾರ ಜಾತ್ರೆ ಹುಂಡಿಯಲ್ಲಿ 27 ಲಕ್ಷ ರೂ. ಕುರುವತ್ತಿ – 9 ಲಕ್ಷ ಭಕ್ತಾದಾಯ

ಹೂವಿನಹಡಗಲಿ, ಮಾ.25- ತಾಲ್ಲೂಕಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಜಾತ್ರೆ ಹಾಗೂ ಕಾರಣಿಕದ ನಂತರ ತೆರೆಯಲಾದ ಹುಂಡಿಗಳ ಎಣಿಕೆಯಲ್ಲಿ ರೂ. 27,23,560 ಸಂಗ್ರಹವಾಗಿದೆ.

ಕುರುವತ್ತಿ  ದೇವಸ್ಥಾನದ ಹುಂಡಿಯನ್ನು ತೆರೆದು ಎಣಿಕೆ ಮಾಡಲಾಗಿ 9,50,000 ಭಕ್ತಾದಾಯ ಬಂದಿದೆ. ಆದರೆ ಎರಡೂ ದೇವಸ್ಥಾನಗಳ ಹುಂಡಿಗಳ ಲ್ಲಿ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಈ ಸಾರಿ ಭಕ್ತರು ಕಾಣಿಕೆ ರೂಪದಲ್ಲಿ ಹಾಕಿಲ್ಲ  ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ
ಹೆಚ್. ಗಂಗಾಧರಪ್ಪ ತಿಳಿಸಿದ್ದಾರೆ.

ಸದರಿ ಹಣವನ್ನು ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಎಣಿಕೆ ಮಾಡಲಾಗಿದೆ.

error: Content is protected !!