ದಾವಣಗೆರೆ ಕೆ.ಬಿ. ಬಡಾವಣೆಯ ದೀಕ್ಷಿತ್ ರಸ್ತೆಯ ರಾಘವೇಂದ್ರ ಮಠದ ಪಕ್ಕದ ವಾಸಿ ರವೀಂದ್ರನಾಥ್ ಶಿರಸ್ತಹಳ್ಳಿ (ಪೆಪ್ಸಿ ಬಾಬಣ್ಣ) ಇವರ ಪುತ್ರ ಡಾ|| ಎಸ್.ಆರ್. ನಿತಿನ್ ಅವರು ದಿನಾಂಕ 05.08.2021ರ ಗುರುವಾರ ಸಂಜೆ 5.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 24 ವರ್ಷ ವಯಸ್ಸಾಗಿತ್ತು. ತಂದೆ, ತಾಯಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 06.08.2021ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಗರದ ಬೂದಿಹಾಳ್ ರಸ್ತೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 3, 2024