ಅಪ್ಪೇನಹಳ್ಳಿ ತಾಂಡಾದಲ್ಲಿ ಕುರಿಗಳನ್ನು ಹೊತ್ತೊಯ್ದ ಚಿರತೆ

ಕೂಡ್ಲಿಗಿ, ಆ.5- ತಾಲ್ಲೂಕು ಅಪ್ಪೇನಹಳ್ಳಿ ತಾಂಡದಲ್ಲಿ ಆ. 4ರಂದು ತಡರಾತ್ರಿ ಮೂರು ಚಿರತೆಗಳು ಗ್ರಾಮದ ಅಂಚಿನಲ್ಲಿರುವ ಮನೆಯ ಅಂಗಳದಲ್ಲಿದ್ದ  ಕುರಿಗಳನ್ನು  ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕೆಲ ತಿಂಗಳಿಂದ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಅಪ್ಪೇನಹಳ್ಳಿ ತಾಂಡಾ ಹಾಗೂ ಸುತ್ತ ಮುತ್ತಲ ಗ್ರಾಮದವರು ಭಯಭೀತರಾಗಿದ್ದಾರೆ. ರೈತರು ಕೃಷಿ ಚಟುವಟಿಕೆಗಾಗಿ ತಮ್ಮ ಹೊಲಗಳಿಗೆ ತೆರಳಲು ತೀವ್ರವಾಗಿ ಭಯ ಪಡುತ್ತಿದ್ದು, ಅರಣ್ಯ ಇಲಾಖೆಯವರು ಚಿರತೆಗಳನ್ನು ಹಿಡಿದು ಬೇರೆಡೆಗೆ ಸಾಗಿಸಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.

error: Content is protected !!