ಹೊನ್ನಾಳಿಯಲ್ಲಿ ಶೈಕ್ಷಣಿಕ ಕಾರ್ಯಾಗಾರ

ಹೊನ್ನಾಳಿ, ಮಾ.24- ತಾಲ್ಲೂಕಿನ ಪ್ರೌಢಶಾಲಾ ಮಟ್ಟದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಶೈಕ್ಷಣಿಕ ಕಾರ್ಯಾಗಾರವನ್ನು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದನಿಮಿತ್ತ ಸಹ ನಿರ್ದೇಶಕ ಹೆಚ್. ಮಂಜುನಾಥ್ ಉದ್ಘಾಟಿಸಿದರು.

ವಿದ್ಯಾರ್ಥಿಗಳಲ್ಲಿ ಕಲಿಕೆಯ ಗುಣಮಟ್ಟ ಸುಧಾರಿಸಿ ತಾಲ್ಲೂಕಿನ ಶೈಕ್ಷಣಿಕ ಪ್ರಗತಿ ವೃದ್ಧಿಸುವ ನಿಟ್ಟಿನಲ್ಲಿ ವಿಷಯ ಶಿಕ್ಷಕರಿಗೆ ನೂತನ ಮಾದರಿಯ ಬೋಧನಾ ಕಲೆಯ ಬಗ್ಗೆ ವಿವರಿಸಲಾಯಿತು. ತಾಲ್ಲೂಕಿನ ವಿಷಯವಾರು ಶಿಕ್ಷಕರುಗಳು ಭಾಗವಹಿಸಿದ್ದರು. ಬಿಇಒ ರಾಜೀವ್, ಬಿಆರ್‍ಸಿ ಉಮಾಶಂಕರ್, ಇಸಿಒ ಬಸವರಾಜ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ರವಿಗೌಡ, ಪ್ರಸನ್ನಕುಮಾರ್, ಚಂದ್ರಶೇಖರ್ ವಿಷಯ ಪರಿವೀಕ್ಷಕರಾದ ವಸಂತಕುಮಾರಿ, ಸುರೇಶ್, ಶಶಿಕಲಾ ಭಾಗವಹಿಸಿದ್ದರು.

error: Content is protected !!