ಮಲೇಬೆನ್ನೂರಿನಲ್ಲಿ ಗಂಧದ ಮೆರವಣಿಗೆ

ಮಲೇಬೆನ್ನೂರು, ಮಾ.24- ಇಲ್ಲಿನ ಹಜರತ್‌ ಸೈಯದ್‌ ಹಬೀಬುಲ್ಲಾ ಷಾ ಖಾದ್ರಿ ಅವರ ಉರುಸು ಅಂಗವಾಗಿ ಬುಧವಾರ ಸಂಜೆ ಪಟ್ಟಣದಲ್ಲಿ ಗಂಧ (ಸಂದಲ್‌)ದ ಮೆರವಣಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಫಕೀರ ಸ್ವಾಮಿಗಳ ಪವಾಡಗಳು ಮತ್ತು ಕುದುರೆ ಕುಣಿತ ಮೆರವಣಿಗೆಯಲ್ಲಿ ಗಮನ ಸೆಳೆದವು. ಮೆರವಣಿಗೆ ವೇಳೆ ಹಿಂದೂ-ಮುಸ್ಲಿಂ ಬಾಂಧವರು ಗಂಧದ ಪೂಜೆ ಮಾಡಿ, ಭಕ್ತಿ ಸಮರ್ಪಿಸಿದರು.

ಗುರುವಾರ ದರ್ಗಾದಲ್ಲಿ ಉರುಸು ಜರುಗಲಿದ್ದು, ರಾತ್ರಿ 9 ಗಂಟೆಯಿಂದ ಪ್ರಸಿದ್ಧ ಖವ್ವಾಲರಿಂದ ಖವ್ವಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಉರುಸು ಕಾರ್ಯಕ್ರಮವನ್ನು ಸರಳವಾಗಿ ಏರ್ಪಡಿಸಲಾಗಿದೆ.

error: Content is protected !!