ಜೀವ ಬೆದರಿಕೆ ಹಾಕಿದವರನ್ನು ಬಂಧಿಸಲು ಸಮರ ಸೇನೆ ಮನವಿ

ಹೂವಿನಹಡಗಲಿ, ಮಾ. 23 – ಕರ್ನಾಟಕ ಸಮರ ಸೇನೆಯ ಆಜೀವ ಗೌರವ ಸದಸ್ಯರೂ ಆದ ಹಿರಿಯ ನಟ ಶಿವರಾಜ್‌ಕುಮಾರ್, ಮಾಜಿ ಸಚಿವೆ ಬಿ.ಟಿ. ಲಲಿತ ನಾಯ್ಕ್, ಪಬ್ಲಿಕ್‌ ಟಿ.ವಿ. ಸಂಪಾದಕ ರಂಗನಾಥ್‌ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರುಗಳಿಗೆ ಕೊಲೆ ಬೆದರಿಕೆ ಪತ್ರ ಕಳಿಸಿದವರನ್ನು ಕೂಡಲೇ ಬಂಧಿಸುವಂತೆ ಕರ್ನಾಟಕ ಸಮರ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಂ. ವೀರಯ್ಯಸ್ವಾಮಿ, ಮತ್ತಿತರರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

error: Content is protected !!