ಹೆದ್ದಾರಿಯಲ್ಲಿ ವಾಹನ ಚಾಲಕರಿಗೆ ಆಹಾರ ವಿತರಣೆ

ದಾವಣಗೆರೆ, ಜೂ.18- ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಚಾಲಕರಿಗೆ ಹಾರ್ವೆಸ್ಟರ್‌ ಮಾಲೀಕರ ಸಂಘದ ವತಿಯಿಂದ ನಿತ್ಯ ಆಹಾರದ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ್ ತುರ್ಚಘಟ್ಟ ತಿಳಿಸಿದ್ದಾರೆ.

ಲಾಕ್‌ಡೌನ್‌ ಪೂರ್ತಿ ಅನ್‌ಲಾಕ್‌ ಆಗುವವರೆಗೂ ಆಹಾರ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಗುವುದು, ಜೊತೆಗೆ ಗುಡಿಸಲು ವಾಸಿಗಳಿಗೂ ಕೂಡ ಆಹಾರ ವಿತರಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಹಳೆ ಆಸ್ಪತ್ರೆ, ಚಿಗಟೇರಿ ಆಸ್ಪತ್ರೆ, ಚೆಕ್‌ ಪೋಸ್ಟ್‌ಗಳಲ್ಲಿ ಇರುವ ಪೊಲೀಸರಿಗೆ ಆಹಾರ ನೀಡುತ್ತಿದ್ದು, ಇದಲ್ಲದೇ ಹಮಾಲರು, ಗ್ಯಾಸ್‌ ಏಜೆನ್ಸಿ ಕಾರ್ಮಿಕರು, ಆಟೋ ಚಾಲಕರು, ಅಡುಗೆ ಸಿದ್ಧತೆ ಮಾಡುವ ಸ್ಥಳಕ್ಕೆ ಬಂದು ಆಹಾರ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಚಂದ್ರಶೇಖರ್‌  ಹೇಳಿದ್ದಾರೆ.

ಯೋಗೀಶ್‌, ರಮೇಶ್‌ ಬಾಬು, ಶ್ಯಾಗಲೆ ಶಾಂತಕುಮಾರ್‌, ಸುನೀಲ್‌ ಬೆಳವನೂರು, ಅಭಿಜಿತ್‌ ಬೆಳವನೂರು, ಸಚಿನ್‌, ಪ್ರದೀಪ್, ಲೋಹಿತ್‌, ಯತಿರಾಜ್‌, ಶ್ರೀಧರ್‌, ಅರುಣ್‌, ನವೀನ್‌ ಮತ್ತಿತರರು
ಈ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

error: Content is protected !!