ತರಳಬಾಳು ಶ್ರೀಗಳ ಜನ್ಮ ದಿನ ನಗರದಲ್ಲಿ ಸಿಹಿ, ಪ್ರಸಾದ ವಿತರಣೆ

ದಾವಣಗೆರೆ, ಜೂ.17- ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಮಹಾಸ್ವಾಮೀಜಿ ಜನ್ಮ ದಿನದ ಪ್ರಯುಕ್ತ ನಗರದ ಸಿ.ಜಿ. ಆಸ್ಪತ್ರೆ ಮುಂಭಾಗದಲ್ಲಿ ಸಾರ್ವಜನಿಕರಿಗೆ ಸಿಹಿ ಪ್ರಸಾದ ವಿತರಿಸಲಾ ಯಿತು. ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯದ ವತಿಯಿಂದ ಹಮ್ಮಿಕೊಂಡಿದ್ದ 1500 ಕ್ಕೂ ಹೆಚ್ಚು ಜನರಿಗೆ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಿರೀಶ್, ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ತರಳಬಾಳು ಸೇವಾ ಸಮಿತಿ ಅಧ್ಯಕ್ಷ ಶಶಿಧರ್ ಹೆಮ್ಮನಬೇತೂರು, ಗೌರವಾಧ್ಯಕ್ಷ ಮಾಗನೂರು ಉಮೇಶ್ ಗೌಡ್ರು, ಲಿಂಗರಾಜ್ ಅಗಸನಕಟ್ಟೆ, ಶ್ರೀನಿವಾಸ್ ಮೆಳ್ಳೇಕಟ್ಟೆ, ಸತೀಶ್ ಸಿರಿಗೆರೆ, ಪ್ರಭು ಕಾವಲಳ್ಳಿ, ಶಿವಕುಮಾರ್ ಕೊರಟಗೆರೆ, ಧನ್ಯಕುಮಾರ್ ಎಲೆಬೇತೂರು, ಪರಮೇಶ್ವರಪ್ಪ ಕಕ್ಕರಗೊಳ್ಳ ಇನ್ನಿತರರಿದ್ದರು.

error: Content is protected !!