ಎಸ್‌ಡಿಎಂಸಿ ಸದಸ್ಯರಿಗೆ ಕಾರ್ಯಾಗಾರ

ಹರಪನಹಳ್ಳಿ, ಮಾ.21- ಪಟ್ಟಣದ 11ನೇ ವಾರ್ಡ್‍ನ ಚಿತ್ತಾರಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಮೇನ್ ಸ್ಕೂಲ್)  ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ (ಎಸ್‍ಡಿಎಂಸಿ) ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.

ಪುರಸಭೆ ಸದಸ್ಯ ಜಾಕೀರ್ ಹುಸೇನ್ ಸರ್ಖಾವಸ್ ಮಾತನಾಡಿ, ಶಾಲೆಯು ಸಮಾಜದ ಅಂಗವಾಗಿರುವುದರಿಂದ ಎಸ್‍ಡಿಎಂಸಿಯವರು ಹಾಗೂ ಶಿಕ್ಷಣ ಪ್ರೇಮಿಗಳು ಶಾಲಾ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.ಎಸ್‍ಡಿಎಂಸಿಯವರು ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಸಬೇಕು. ಸಮವಸ್ತ್ರ, ಶೂ, ಸಾಕ್ಸ್ ಖರೀದಿಯಲ್ಲಿ ರಾಜೀಯಾಗದಂತೆ ಗುಣಮಟ್ಟ ಕಾಯ್ದುಕೊಳ್ಳಬೇಕು ಹಾಗೂ ಬಿಸಿಯೂಟದ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಎಸ್‍ಡಿಎಂಸಿ ಅಧ್ಯಕ್ಷೆ ಬಿ. ಅನಿತಾ, ಉಪಾಧ್ಯಕ್ಷ ಎನ್. ಮಹಬೂಬ್ ಸಾಬ್‌, ಬಿಆರ್‍ಪಿ ಚನ್ನಪ್ಪ ಕಂಬಳಿ, ಸಿಆರ್‍ಪಿ ಶಿವಪ್ರಕಾಶ್, ಎಸ್‍ಡಿಎಂಸಿ ಸದಸ್ಯರು ಸೇರಿದಂತೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಉಪಸ್ಥಿತರಿದ್ದರು.

error: Content is protected !!