ಬಂಗಾರದಂಗಡಿ ಮಾಲೀಕನಿಗೆ ವಂಚನೆ

ಆರೋಪಿ ಬಂಧನ: 12 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ ವಶ

ದಾವಣಗೆರೆ, ಮಾ.21- ಆಭರಣ ತಯಾರಿಸಿ ಕೊಡುವುದಾಗಿ ನಂಬಿಸಿ ಬಂಗಾರದ ಅಂಗಡಿ ಮಾಲೀಕರೋರ್ವರಿಗೆ ವಂಚಿಸಿದ್ದ ಆರೋಪಿತನನ್ನು ಬಂಧಿಸಿ, 12 ಲಕ್ಷದ 7,500 ರೂ. ಮೌಲ್ಯದ 345 ಗ್ರಾಂ ಬಂಗಾರವನ್ನು ಇಲ್ಲಿನ ಬಸವನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂಲತಃ ಪಶ್ಚಿಮ ಬಂಗಾಳ ರಾಜ್ಯದ ಬಂಗಾರದ ಕೆಲಸ ಮಾಡುವ ಆರೋಪಿತ ಗೌರ್ ಅದಕ್ ಅಲಿಯಾಸ್ ಸಮೂಲ್ ಭರತ್ ಜ್ಯೂಯಲರಿ ಮಾಲೀಕ ವಿಜಯಕುಮಾರ್ ಅವರ ಬಳಿ ಅಂಗಡಿಯಿಂದ ಆಭರಣ ಮಾಡಲು ಕೊಟ್ಟಿದ್ದ 450 ಗ್ರಾಂ ಬಂಗಾರವನ್ನು ನಂಬಿಸಿ ಮೋಸ ಮಾಡಿ ತೆಗೆದುಕೊಂಡು ಹೋಗಿರುವ ಬಗ್ಗೆ ಡಿ.21,2020 ರಂದು ಬಸವನಗರ ಪೊಲೀಸ್ ಠಾಣೆಯಲ್ಲಿ ನಂಬಿಕೆ ದ್ರೋಹದ ಪ್ರಕರಣ ದಾಖಲಿಸಲಾಗುತ್ತು.

ಬಸವನಗರ ಪೊಲೀಸ್ ಠಾಣೆಯ ಪಿಐ ನಾಗಪ್ಪ ಬಂಕಾಳಿ ಹಾಗೂ ಪಿಎಸ್ಐ ಶೀಲಾ ಹೊಂಗಲ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಜಿ.ಆರ್. ಶಿವಪ್ಪ, ಫಕೃದ್ದೀನ್, ಪ್ರಭಾಕರ, ಮಹಮ್ಮದ್ ರಫಿ, ಮಹಮ್ಮದ್ ಯುಸೂಫ್, ವಿಶ್ವನಾಥ್ ಗಡ್ಡಿ ಒಳಗೊಂಡ ತಂಡವು ಬಂಗಾರವನ್ನು ವಶಪಡಿಸಿಕೊಂಡು ಆರೋಪಿತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

error: Content is protected !!