ನಾಟಿ ವೈದ್ಯ ಬಿ. ಹೊಸೂರಪ್ಪಗೆ ವಾಲ್ಮೀಕಿ ಸಮಾಜದಿಂದ ಸನ್ಮಾನ

ಹರಪನಹಳ್ಳಿ, ಆ.4- ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಬಾಗಳಿ ಗ್ರಾಮದ ಹೆಸರಾಂತ ಕೀಲು, ಮೂಳೆ ನಾಟಿ ಔಷಧಿ ವೈದ್ಯ ತಾಲ್ಲೂಕು ಗಂಗಾಮತ ಸಮಾಜದ ಅಧ್ಯಕ್ಷ ಬಿ. ಹೊಸೂರಪ್ಪ ಅವರನ್ನು ವಾಲ್ಮೀಕಿ ನಾಯಕ ಸಮಾಜದಿಂದ ಸನ್ಮಾನಿಸಿ, ಗೌರವಿಸಲಾಯಿತು. ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ. ಚಂದ್ರಪ್ಪ, ಉಪಾಧ್ಯಕ್ಷ ಮಂಡಕ್ಕಿ ಸುರೇಶ್‌, ಪ್ರಧಾನ ಕಾರ್ಯದರ್ಶಿ ಟಿ.ಬಿ. ರಾಜು ಇನ್ನಿತರರಿದ್ದರು.

error: Content is protected !!