ಸಮಯೋಜಿತ ಜನರ ಸೇವೆ ಶ್ಲ್ಯಾಘನೀಯ

ಕಾಗಿನೆಲೆ ಸ್ವಾಮೀಜಿ ಮೆಚ್ಚುಗೆ

ಹರಿಹರ, ಜೂ.16- ನಂದಿಗಾವಿ ಎನ್.ಹೆಚ್.ಶ್ರೀನಿವಾಸ್‌ ಅವರ ಸಮಯೋಜಿತ ಸಾರ್ವಜನಿಕ ಸೇವೆ ಶ್ಲ್ಯಾಘನೀಯ ಎಂದು ಕಾಗಿ ನೆಲೆ ಕನಕ ಗುರುಪೀಠದ ಶ್ರೀ ನಿರಂಜನಾ ನಂದಪುರಿ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಎನ್.ಹೆಚ್.ಶ್ರೀನಿವಾಸ್ ಸ್ನೇಹ ಬಳಗದ ವತಿಯಿಂದ ಅಕ್ಷಯ ಅಡುಗೆ ಕಾರ್ಮಿಕರ ಸಂಘದ ಎಲ್ಲಾ ಕಾರ್ಮಿಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಶ್ರೀಗಳು ಮಾತನಾಡಿದರು.

ಸಮಾಜ ಸೇವಕ ಶ್ರೀನಿವಾಸ್ ಮಾತನಾಡಿ, ನಮ್ಮ ಸಹೋದರ ಸತ್ಯನಾರಾಯಣ ಮತ್ತು ಸ್ನೇಹ ಬಳಗದ ಎಲ್ಲಾ ಸದಸ್ಯರು ಚರ್ಚಿಸಿ, ನಮ್ಮ ಆದಾಯದಲ್ಲಿ ಕೆಲ ಭಾಗವನ್ನು ಬಡವರು, ಸಾರ್ವಜನಿಕರಿಗೆ ನೀಡುವ ಮೂಲಕ ನಮ್ಮ ಕೈಲಾದ ಸೇವೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸೇವಾ ಕಾರ್ಯ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ಕಾರ್ಮಿಕರ ಸಂಘದ ಅಧ್ಯಕ್ಷ ಬಿ.ಬಿ.ಪ್ರಭಾಕರ್ ಮಾತನಾಡಿದರು. ಶ್ರೀನಿವಾಸರ ಸಹೋದರ ಎನ್‌.ಹೆಚ್‌. ಸತ್ಯನಾರಾಯಣ, ಸ್ನೇಹ ಬಳಗದ ವೆಂಕಟೇಶ್‌ ಶೆಟ್ಟಿ, ಸುಚೇತ್‌ ಪೂಜಾರ್‌, ಕೆ.ಎಸ್‌. ಕಾಂತೇಶ್‌, ಮುನೀಂದ್ರ, ಹೇಮಂತ್‌, ನಿರಂಜನ್‌, ಸೋಮಶೇಖರ್‌, ಅಕ್ಷಯ ಅಡುಗೆ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಶೇಖರಪ್ಪ, ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ಪ್ರಭಾಕರ್‌ ಜೋಷಿ, ಸಂಘಟನಾ ಕಾರ್ಯದರ್ಶಿಗಳು ಇದ್ದರು.

error: Content is protected !!