ಕರುಣಾದಿಂದ ಬಡ ಮಹಿಳೆಯರಿಗೆ ತಳ್ಳುವ ಗಾಡಿ ಮತ್ತು ಆರ್ಥಿಕ ನೆರವು

ದಾವಣಗೆರೆ, ಮಾ. 19- ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಬಡ ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ 5 ತಳ್ಳುವ ತರಕಾರಿ ಗಾಡಿ ಹಾಗೂ ತಾಡಪಾಲ್ ವಿತರಿಸಲಾಯಿತು ಹಾಗೂ ತರಕಾರಿ, ಹಣ್ಣು ಕೊಳ್ಳಲು ತಲಾ ಒಂದು ಸಾವಿರ ರೂ.ಒಂದು ದಿನದ ಬಂಡವಾಳ ಒದಗಿಸಲಾಯಿತು.

ಅತಿಥಿಗಳಾಗಿ ಬಾ.ಮ. ಬಸವರಾಜಯ್ಯ, ನಿರ್ಮಲಮ್ಮ ಡಾ. ಕರಿಬ ಸಪ್ಪ ಉಪಸ್ಥಿತರಿದ್ದರು. ಕರುಣಾ ಟ್ರಸ್ಟ್ ಅಧ್ಯಕ್ಷ ಸಿ.ಜಿ. ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಕರುಣಾ ಟ್ರಸ್ಟಿನ  ಖಜಾಂಚಿ ಎಂ. ಶಿವಪ್ಪ, ನಿರ್ದೇಶಕರು ಗಳಾದ ಡಾ. ಹೆಚ್.ವಿ. ವಾಮದೇವಪ್ಪ, ಮಂಜುಳಾ ಬಸವಲಿಂಗಪ್ಪ,
ಡಾ.ಹೆಚ್.ಎನ್.ಮಲ್ಲಿಕಾರ್ಜುನ್, ಶಿವನಕೆರೆ ಬಸವಲಿಂಗಪ್ಪ ಉಪಸ್ಥಿತರಿದ್ದರು.

error: Content is protected !!