ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಋಣ ತೀರಿಸಿ : ಗುನ್ನಳ್ಳಿ ರಾಘವೇಂದ್ರ

ಕೂಡ್ಲಿಗಿ, ಮಾ.18- ಸರ್ಕಾರಿ ನೌಕರರು, ಸಾರ್ವಜನಿಕ ಕ್ಷೇತ್ರದಲ್ಲಿರು ವವರು, ಸಂಘಟನಾಕಾರರು ಹಾಗೂ ಜನಪ್ರತಿನಿಧಿಗಳು, ಮೊದಲು ಅವರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕಿದೆ ಎಂದು ಎಸ್‌ಡಿಎಂಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಮುಖಂಡ ಗುನ್ನಳ್ಳಿ ರಾಘವೇಂದ್ರ ಹೇಳಿ ದರು. ಅವರು ಪಟ್ಟಣದ ಆದರ್ಶ ಮಹಾವಿದ್ಯಾಲಯದಲ್ಲಿ ಎಸ್‌ಡಿಎಂಸಿ ಪದಾಧಿಕಾರಿಗಳ ಆಯ್ಕೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

 ಶಾಲಾ ಮುಖ್ಯ ಶಿಕ್ಷಕ ರೇವಣಾರಾಧ್ಯ, ಪ.ಪಂ. ಸದಸ್ಯೆ ಸರಸ್ವತಿ ರಮೇಶ್, ಶಿಕ್ಷಕ ಕೊಟ್ರೇಶ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎಂ.ಎಂ. ವೀರಯ್ಯ,  ಸದಸ್ಯರು, ಯುವ ಮುಖಂಡ ರಮೇಶ್ ಹಾಗೂ  ಶಿಕ್ಷಕರು ವೇದಿಕೆಯಲ್ಲಿದ್ದರು. 

error: Content is protected !!