ಮುರುಘಾಮಠ ಶಾಲೆಗಳಿಗೆ ಪೀಠೋಪಕರಣ ವಿತರಣೆ

ಚಿತ್ರದುರ್ಗ, ಮಾ. 17- ನಗರದ ಲಿಂ.ಶ್ರೀ ಜಯದೇವ ಜಗದ್ಗುರುಗಳವರ 64 ನೇ ಸ್ಮರಣೋತ್ಸವದ ಅಂಗವಾಗಿ ಮುರುಘಾಮಠದ ಶಾಲೆಗಳಿಗೆ ಸುಮಾರು ಲಕ್ಷ ರೂ. ಮೌಲ್ಯದ ಪೀಠೋಪಕರಣ, ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್‌ಗಳನ್ನು ಹರಿಹರ ಗ್ರೀನ್ ಸಿಟಿಯ ಮಾಲೀಕ ರಘುಬಾಯಿ ಪಟೇಲ್, ನಸೀರ್ ಅಹಮದ್ ಅವರು ನೀಡಿದರು. ಈ ಸಂದರ್ಭದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು, ಶ್ರೀ ಬಸವಪ್ರಭು ಸ್ವಾಮೀಜಿ, ಎಂ. ಜಯಕುಮಾರ್ , ಅಂದನೂರು ಮುಪ್ಪಣ್ಣ , ಎಂ.ಕೆ. ಬಕ್ಕಪ್ಪ ಇತರರು ಇದ್ದರು.

error: Content is protected !!