ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ

ದಾವಣಗೆರೆ, ಆ.1 – ನಗರದ ರೋಟರಿ ಬಾಲ ಭವನದಲ್ಲಿ ಕರ್ನಾಟಕ ನ್ಯೂಸ್ ಮೀಡಿಯಾ ಯೂನಿಯನ್ ಟ್ರಸ್ಟ್ ವಾರ್ಷಿಕೋತ್ಸವದ ಅಂಗವಾಗಿ ಪತ್ರಿಕಾ ವಿತರಕರಿಗೆ ಹಾಗೂ ಹಾಲು ವಿತರಕರಿಗೆ ಜರ್ಕಿನ್ ಹಾಗೂ ಆಹಾರದ ಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೆಳವನೂರು ಗ್ರಾ ಪಂ ಸದಸ್ಯರುಗಳಾದ ತಿಪ್ಪೇಸ್ವಾಮಿ, ನವೀನ್, ಶಾಮನೂರು ಪ್ರವೀಣ್, ಕಾಂಗ್ರೆಸ್ ಮುಖಂಡ ರಮೇಶ್, ಅಧ್ಯಕ್ಷ ಜೆ. ರಮೇಶ್, ಗಿರೀಶ್ ಸಿಎನ್, ಅಭಿಷೇಕ್ ಕೆವಿ, ವಿನಾಯಕ್ ಎಂಜಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!