ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಹನುಮಂತಪ್ಪ ಅವರಿಗೆ ಸನ್ಮಾನ

ಹರಪನಹಳ್ಳಿ, ಮಾ.13-  ತಾಲ್ಲೂಕಿನ ಬಾಗಳಿ ಗ್ರಾಮ ಪಂಚಾಯ್ತಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ  ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿ ಪೂಜಾರ್ ಹನುಮಂತಪ್ಪನವರಿಗೆ ಪಟ್ಟಣದ ಅಹಿಂದ ಪರಿಷತ್ ಕಚೇರಿಯಲ್ಲಿ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ವೇಳೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ  ಷಣ್ಮುಖಪ್ಪ,  ಉಪಾಧ್ಯಕ್ಷ ಕೇದಾರಸ್ವಾಮಿ, ಸದಸ್ಯರಾದ ಹಲವಾಗಲು ಯರಿತಾತ, ಕಡತಿ ರಾಜಪ್ಪ, ಟಿ. ಮಂಜುನಾಥ ಇನ್ನಿತರರಿದ್ದರು.

error: Content is protected !!