ತುಂಬಿಗೆರೆ ಪಿಎಸಿಎಸ್‌ ಅಧ್ಯಕ್ಷರಾಗಿ ಮಂಜುನಾಥಯ್ಯ ಆಯ್ಕೆ

ತುಂಬಿಗೆರೆ ಪಿಎಸಿಎಸ್‌ ಅಧ್ಯಕ್ಷರಾಗಿ ಮಂಜುನಾಥಯ್ಯ ಆಯ್ಕೆ - Janathavaniದಾವಣಗೆರೆ, ಮಾ. 12- ತಾಲ್ಲೂಕಿನ ತುಂಬಿಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿದ್ಧನೂರಿನ ಎಸ್‌.ಎಂ ಮಂಜುನಾಥಯ್ಯ ಹಾಗೂ ಉಪಾಧ್ಯಕ್ಷರಾಗಿ ಬೋರ ಗೊಂಡನಹಳ್ಳಿಯ ಬಿ. ಲಕ್ಷ್ಮಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ ಅಧೀಕ್ಷಕ ಆರ್‌. ರಮೇಶ್‌ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಡಿ.ಜಿ.ಸಿ. ದಿನೇಶ್‌ಕುಮಾರ್‌, ಎಸ್‌. ಬಸವರಾಜ್, ಬಿ.ಕೆ. ಜಯಪ್ರಕಾಶ್‌, ಜಿ.ಸಿ. ಹಾಲೇಶ್‌, ಎಂ.ಬಿ. ಪರಶುರಾಮಪ್ಪ, ನೀಲಕಂಠಪ್ಪ, ಟಿ.ಎಂ. ಶಂಕರಯ್ಯ, ಕೆ.ಎಂ. ಮಂಜಪ್ಪ, ಬಸಮ್ಮ, ಎಂ.ಆರ್‌. ನೇತ್ರಾವತಿ ಕಾರ್ಯನಿರ್ವಹಣಾಧಿಕಾರಿ ಹೆಚ್‌.ಬಿ.ಭೂಮೇಶ್ವರಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!