ಎಸ್ಸೆಸ್ಸೆಂ ನಿವಾಸಕ್ಕೆ ಹೆಚ್.ಕೆ.ಪಾಟೀಲ್ ಭೇಟಿ

ದಾವಣಗೆರೆ, ಜು.24- ಮಾಜಿ ಸಚಿವರೂ, ಶಾಸಕರೂ, ರಾಜ್ಯ ಪಟ್ಟಣ ಸಹಕಾರ ಬ್ಯಾಂಕ್‌ಗಳ ಮಹಾಮಂಡಳದ ಅಧ್ಯಕ್ಷರೂ ಆದ ಹೆಚ್.ಕೆ. ಪಾಟೀಲ್ ಅವರು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ಹೆಚ್.ಕೆ.ಪಾಟೀಲ್ ಅವರನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು  ಎಸ್.ಎಸ್.ಮಲ್ಲಿಕಾರ್ಜುನ್ ಆತ್ಮೀಯವಾಗಿ ಬರಮಾಡಿಕೊಂಡು ಗೌರವಿಸಿದರು.

ಈ ಸಂದರ್ಭದಲ್ಲಿ ಶಾಸಕ  ಪಿ.ಟಿ.ಪರಮೇಶ್ವರನಾಯ್ಕ, ದಾವಣಗೆರೆ ಅರ್ಬನ್ ಬ್ಯಾಂಕ್ ನಿರ್ದೇಶಕರುಗಳಾದ ಬಿ.ಸಿ.ಉಮಾ ಪತಿ, ಕಂಚಿಕೆರೆ ಮಹೇಶ್, ರಾಜಣ್ಣ ಮತ್ತಿತರರಿದ್ದರು.

error: Content is protected !!