ಸಿಂಪಿ ಸಮಾಜದಿಂದ ಪ್ರತಿಭಾ ಪುರಸ್ಕಾರ

ಹೊನ್ನಾಳಿ, ಮಾ.6- ಪಟ್ಟಣದ ಪಾಂಡುರಂಗ ದೇವಸ್ಥಾನದಲ್ಲಿ ನಾಮದೇವ ಸಿಂಪಿ ಸಮಾಜ, ಜ್ಞಾನೇಶ್ವರಿ ವಿದ್ಯಾನಿಧಿ ಸಮಿತಿಯಿಂದ 103 ನೇ ದಿಂಡಿ  ಮಹೋತ್ಸವದ ಅಂಗವಾಗಿ ಪ್ರತಿಭಾ ಪುರಸ್ಕಾರ ಹಾಗೂ ಧರ್ಮಸಭೆ ಹಮ್ಮಿಕೊಳ್ಳಲಾಗಿತ್ತು.

ಸಿಂಪಿ ಸಮಾಜದ ಮುಖಂಡರಾದ ಹೆಚ್‌.ಪಿ. ಪ್ರಹ್ಲಾದ್ ರಾವ್ ಉದ್ಘಾಟನೆ ನೆರವೇರಿಸಿ ದರು. ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎಂ. ನಾಗರಾಜ್ ಮೂಳೆಕರ್ ಮಾತನಾಡಿ, ದಿಂಡಿ ಹಬ್ಬವನ್ನು ಮತ್ತಷ್ಟು ಸಂಪ್ರದಾಯಬದ್ಧವಾಗಿ ಆಚರಿಸೋಣ ಎಂದು ಕರೆ ನೀಡಿದರು.

ಪಂಚಾಯ್ತಿ ನಾಮಿನಿ ಸದಸ್ಯೆ ಸೌಮ್ಯ ಮಾತ ನಾಡಿ, ಜ್ಞಾನೇಶ್ವರಿ ಪಾರಾಯಣಕ್ಕೆ ಹೆಚ್ಚಿನ ಜನರು ಆಗಮಿಸುವಂತಾಗಲಿ ಎಂದು ಆಶಿಸಿದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಹಿರಿಯ ಸಂತರು, ದಾನಿಗಳನ್ನು ಗೌರವಿಸಲಾಯಿತು.

ಸಿಂಪಿ ಸಮಾಜದ ಪ್ರಮುಖರಾದ ಸತ್ಯ ನಾರಾಯಣ್ ರಾವ್, ಜಗನ್ನಾಥ್, ನಾಮದೇವ್ ಹೋವಳೆ, ಹೆಚ್. ಪಾಂಡುರಂಗ, ಗಣಪತಿ ಹೋ ವಳೆ, ಸೊರಟೂರು ವಿಠೋಬರಾವ್ ಇನ್ನಿತರ ರಿದ್ದರು. ಅಮೃತ ಗಿರಿಧರ್ ಪ್ರಾರ್ಥಿಸಿದರು. ಗಣಪತಿ ಸ್ವಾಗತಿಸಿದರು. ಶ್ರೀನಿವಾಸ್ ನಿರೂಪಿಸಿದರು, ಗಿರಿ ಪೇಟಕರ್ ವಂದಿಸಿದರು.

error: Content is protected !!