ಹರಿಹರದಲ್ಲಿ ಇಂದು ಕಮ್ಯುನಿಸ್ಟ್ ಪಕ್ಷದ ನೂತನ ಕಛೇರಿ ಉದ್ಘಾಟನೆ

ಹರಿಹರ,ಮಾ.6- ಭಾರತ ಕಮ್ಯುನಿಸ್ಟ್ ಪಕ್ಷದ ಹರಿಹರ ತಾಲ್ಲೂಕು ಮಂಡಳಿಯ ನೂತನ ಕಚೇರಿಯ ಕಟ್ಟಡ ಉದ್ಘಾಟನೆ ನಾಳೆ ದಿನಾಂಕ 7ರ ಭಾನುವಾರ ಬೆಳಿಗ್ಗೆ 11.30 ಕ್ಕೆ ನೆರವೇರಲಿದೆ ಎಂದು ಜಿಲ್ಲಾ ಮಂಡಳಿ ಕಾರ್ಯದರ್ಶಿ ಎಚ್.ಕೆ. ರಾಮಚಂದ್ರಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ನೆರವೇರಿಸುವರು. ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಧ್ವಜಾರೋಹಣ ನೆರವೇರಿಸುವರು. ಹೆಚ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ. ಲೋಕೇಶ್, ರಾಜ್ಯ ಮಂಡಳಿ ಸಹಕಾರ್ಯದರ್ಶಿ ಡಾ. ಕೆ.ಎಸ್. ಜನಾರ್ಧನ್, ನ್ಯಾಯವಾದಿ ಮುರಳೀಧರ್, ಟಿ.ಎಸ್. ನಾಗರಾಜ್, ಆವರಗೆರೆ ಚಂದ್ರು,  ಎಚ್.ಜಿ. ಉಮೇಶ್, ಎಚ್.ಕೆ.   ಕೊಟ್ರಪ್ಪ,  ಟಿ.ಎಚ್. ನಾಗರಾಜ್ ಆಗಮಿಸುವರು.

ಕಟ್ಟಡಕ್ಕೆ ಹಿರಿಯ ಕಾರ್ಮಿಕ ಹೋರಾಟಗಾರರೂ, ನ್ಯಾಯವಾದಿ ಎಂ.ಸಿ. ನರಸಿಂಹನ್ ಅವರ ಹೆಸರು ಇಡಲಾಗಿದೆ. ಒಳಗಡೆ ಇರುವ ಸಭಾಂಗಣಕ್ಕೆ ಕಾರ್ಮಿಕ ಹೋರಾಟಗಾರ ಜೆ.ಎಂ. ಹನುಮಂತಪ್ಪನವರ ಹೆಸರನ್ನಿಡಲಾಗಿದೆ ಎಂದು ರಾಮಚಂದ್ರಪ್ಪ ತಿಳಿಸಿದರು. ಗೋಷ್ಠಿಯಲ್ಲಿ ಎಚ್.ಕೆ. ಕೊಟ್ರಪ್ಪ, ಎಚ್.ಜಿ. ಉಮೇಶ್, ಟಿ.ಎಸ್. ನಾಗರಾಜ್, ಆವರಗೆರೆ ಚಂದ್ರು, ಕುಮಾರ್ ನಾಯ್ಕ್, ಸುರೇಶ್ ಇನ್ನಿತರರಿದ್ದರು.

error: Content is protected !!