ಹರಿಹರ : ಅಂಗನವಾಡಿಯಲ್ಲಿ ಮಕ್ಕಳ ಪೋಷಣ್ ಅಭಿಯಾನ

ಹರಿಹರ, ಮಾ.6- ನಗರದ ಹೊರವಲಯದ ಗುತ್ತೂರು ಗ್ರಾಮದ ಅಂಗನವಾಡಿ ಸಿ ಕೇಂದ್ರದಲ್ಲಿ ಮಕ್ಕಳ ಪೋಷಣ್ ಅಭಿಯಾನ ಹಾಗೂ ಮಕ್ಕಳ ಪೋಷಕರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ ಸಮಾರಂಭವನ್ನು ಸಿಡಿಪಿಓ ನಿರ್ಮಲ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೊಂಡಜ್ಜಿ  ವೃತ್ತದ ಮೇಲ್ವಿಚಾರಕಿ ಶಾಂತಮ್ಮ, ಅಂಗನವಾಡಿ ಶಿಕ್ಷಕಿಯರಾದ ಬಿ.ಎಸ್. ನಿರ್ಮಲಾ, ಎಸ್.ಆರ್. ಮಂಜುಳ, ಎನ್.ಜಿ. ರೇಣುಕಾ, ಆರ್.ಎಸ್. ಜಯಮ್ಮ, ಕೆ.ಸಿ. ಗೌರಮ್ಮ ಹಾಗು ಗ್ರಾಮಸ್ಥರು ಮತ್ತು ಇತರರು ಹಾಜರಿದ್ದರು.

error: Content is protected !!