ಬ್ಯಾಂಕ್ ಮ್ಯಾನೇಜರ್ ಕಿರುಕುಳ ಉದ್ಯೋಗಿಯ ಆತ್ಮಹತ್ಯೆ

ದಾವಣಗೆರೆ, ಜು.22- ಬ್ಯಾಂಕ್ ಮ್ಯಾನೇಜರ್‌ ನೀಡುತ್ತಿದ್ದರೆನ್ನಲಾದ ಮಾನಸಿಕ ಹಿಂಸೆಯ ಆರೋಪದಲ್ಲಿ ಉದ್ಯೋಗಿ ಓರ್ವ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚನ್ನಗಿರಿಯ ವಡ್ನಾಳ್ ರಾಜಣ್ಣ ಬಡಾವಣೆಯ ಪ್ರಶಾಂತ ಗಂಗೂರು (29) ಮೃತನು. ಈತ ಚನ್ನಗಿರಿಯ ಖಾಸಗಿ ಬ್ಯಾಂಕ್‌ವೊಂದರ ಫೀಲ್ಡ್ ವರ್ಕ್ ಕೆಲಸ ಮಾಡುತ್ತಿದ್ದ. ಬ್ಯಾಂಕ್‌ನ ಮ್ಯಾನೇಜರ್ ಕೊಟ್ರೇಶ್ ಎಂಬಾತ ಮೃತ ಪ್ರಶಾಂತ್  ನಿಗೆ ಲಾಕ್‌ಡೌನ್‌ ಸಮಯದಲ್ಲೂ ಸಹ ಕೆಲಸ ಮಾಡುವಂತೆ, ಸರಿಯಾಗಿ ಸಂಬಳ ಕೊಡದೇ ಆಗಾಗ ಹೆಚ್ಚಿನ ಕೆಲಸ ಮಾಡುವಂತೆ ಒತ್ತಡ ಹಾಕುತ್ತಾ ಅವಾಚ್ಯವಾಗಿ ಬೈಯ್ಯುವುದು ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದೇ ದಿನಾಂಕ 19 ರಂದು ವಿಷ ಸೇವಿಸಿ ಅಸ್ವಸ್ಥನಾಗಿದ್ದ ಪ್ರಶಾಂತ್‌  ನನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೊನ್ನೆ ಮೃತಪಟ್ಟಿದ್ದು, ತನ್ನ ಮಗನ ಸಾವಿಗೆ ಕೆಲಸ ಮಾಡುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಕಾರಣ ಎಂದು ಮೃತನ ತಂದೆ ಸದಾನಂದಪ್ಪ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

error: Content is protected !!