ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ವತಿಯಿಂದ ವಿಮಾ ಹಣ ವಿತರಣೆ

ಕೊಂಡಜ್ಜಿ, ಮಾ.7 – ಭಾರತೀಯ ಸ್ಟೇಟ್ ಬ್ಯಾಂಕ್ ಕೊಂಡಜ್ಜಿ ಶಾಖೆ ವತಿಯಿಂದ ಇಂದು ಸಾಮಾಜಿಕ ಭದ್ರತೆ ಯೋಜನೆಗಳಡಿಯಲ್ಲಿ ಫಲಾನುಭವಿ ದಿ. ಹೆಚ್‍.ಬಿ. ಸಿದ್ದೇಶ್ ಅವರ ಪತ್ನಿ ಶ್ರೀಮತಿ ಭಾಗ್ಯ ಕೆ.ಎನ್‍. ಅವರಿಗೆ ವಿಮಾ ಹಣ ವಿತರಿಸಲಾಯಿತು. 

ಈ ಸಂದರ್ಭದಲ್ಲಿ ಬ್ಯಾಂಕಿನ ಕಿರು ಹಣಕಾಸು ಮಾರುಕಟ್ಟೆ ಸೇರ್ಪಡೆ ವಿಭಾಗದ ದಾವಣಗೆರೆ ಕಚೇರಿಯ  ಮುಖ್ಯ ವ್ಯವಸ್ಥಾಪಕ ರಾಜಣ್ಣ ಎಸ್. ಹೆಚ್ ಅಧ್ಯಕ್ಷತೆ  ವಹಿಸಿ ಮಾತನಾಡಿ, ಸಾಮಾಜಿಕ ಭದ್ರತೆ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ  ಯೋಜನೆ, ಅಟಲ್ ಪಿಂಚಣಿ ಯೋಜನೆ, ರುಪೇ ಕಾರ್ಡ್ ಮತ್ತು ಗ್ರಾಹಕ ಸೇವಾ ಕೇಂದ್ರದ ಪ್ರಯೋಜನೆಗಳ ಬಗ್ಗೆ ಸವಿಸ್ತರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎರಡು ಲಕ್ಷ ರೂ.ಗಳ ಚೆಕ್ ವಿತರಣೆ ಮಾಡಲಾಯಿತು.

ಬ್ಯಾಂಕಿನ ವ್ಯವಸ್ಥಾಪಕ ಕುಮಾರ್ ಅಂಕಿತ್, ಮುಖ್ಯ ಕಚೇರಿಯಿಂದ ಆಗಮಿಸಿದ ಉಪ ವ್ಯವಸ್ಥಾಪಕ ನಿತ್ಯಾನಂದ, ಗ್ರಾಮದ ಹಿರಿಯರು, ಗ್ರಾಹಕ ಸೇವಾ ಕೇಂದ್ರ ರಾಜು ಮತ್ತು ಪ್ರಸನ್ನ ಉಪಸ್ಥಿತರಿದ್ದರು.

error: Content is protected !!