ಪೌರ ಕಾರ್ಮಿಕರಿಗೆ ಕಿಟ್ ವಿತರಣೆ

ದಾವಣಗೆರೆ, ಮೇ 4- ಜಿಲ್ಲಾ ವಕೀಲರ ಸಂಘದ ನಿಕಟಪೂರ್ವ ಉಪಾಧ್ಯಕ್ಷರೂ, ಬಿಜೆಪಿ ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕರೂ ಆದ ಹೆಚ್.ದಿವಾಕರ್ ಅವರು ತಮ್ಮ ಮಗ ಆದಿಸುಬ್ರಹ್ಮಣ್ಯನ ಹುಟ್ಟು ಹಬ್ಬವನ್ನು ಪೌರ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್‌ಗಳನ್ನು ಕೊಡುವ ಮೂಲಕ ಆಚರಿಸಿದರು. ಕಾನೂನು ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಎ.ಸಿ.ರಾಘವೇಂದ್ರ, ತಿರುಮಲ್ಲೇಶ್, ಎ.ಎಸ್.ಮಂಜುನಾಥ ಹಾಜರಿದ್ದರು.

error: Content is protected !!