ಕುಂಬಳೂರು: ಸರಳ ರಥೋತ್ಸವಕ್ಕೆ ನಿರ್ಧಾರ

ಮಲೇಬೆನ್ನೂರು, ಮಾ.5 – ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ರಥೋತ್ಸವವನ್ನು ಈ ಬಾರಿ ಸರಳ ಮತ್ತು ಸಾಂಕೇತಿಕ ವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ದೇವಸ್ಥಾನದಲ್ಲಿ ಸಭೆ ನಡೆಸಿದ ದೇವಸ್ಥಾನ ಸಮಿತಿ ಹಾಗೂ ಗ್ರಾಮಸ್ಥರು, ಸರ್ಕಾರದ ಸೂಚನೆಯಂತೆ ಜಾತ್ರೆಯನ್ನು ಆಚರಿಸೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಗ್ರಾಮ ಲೆಕ್ಕಾಧಿಕಾರಿಗಳೂ ಆದ ಮುಜರಾಯಿ ಉಸ್ತುವಾರಿ ಅಧಿಕಾರಿ ಶ್ರೀಧರಮೂರ್ತಿ ತಿಳಿಸಿದರು. ಆದ್ದರಿಂದ ಭಕ್ತರು ಸಹಕರಿಸುವಂತೆ ಗ್ರಾಮಸ್ಥರು ಕೋರಿದ್ದಾರೆ.

error: Content is protected !!