ಗಾಂಜಾ ಮಾರಾಟ : ನಾಲ್ವರ ಬಂಧನ

40 ಸಾವಿರ ಮೌಲ್ಯದ ಗಾಂಜಾ ವಶ

ದಾವಣಗೆರೆ, ಮಾ.5- ಗಾಂಜಾ ಮಾರಾಟದ ವೇಳೆ ದಾಳಿ ನಡೆಸಿರುವ ಕೆಟಿಜೆ ನಗರ ಪೊಲೀಸರು ನಾಲ್ವರನ್ನು ಬಂಧಿಸಿ, 40 ಸಾವಿರ ಮೌಲ್ಯದ 1 ಕೆಜಿ ಗಿಂತಲೂ ಹೆಚ್ಚಿನ ಗಾಂಜಾ ಹಾಗೂ 2 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮ್ಮಣಿ ದೇವರಾಜ ಅರಸು ಬಡಾವಣೆಯ  ಪುನೀತ್ ಯಾದವ್, ಬಂಬೂ ಬಜಾರ್ ನ ಕಿರಣ (21), ಕೆಟಿಜೆ ನಗರ 2ನೇ ಮೇನ್ ವಾಸಿ ಅಡುಗೆ ಭಟ್ಟ ಅಕ್ಷಯ್ (22), ಕೆಟಿಜೆ ನಗರ 17ನೇ ಕ್ರಾಸ್ ರೋಹಿತ್ (21) ಬಂಧಿತರು. 

ನಗರದ ಹದಡಿ ರಸ್ತೆಯಲ್ಲಿನ ಕೆಇಬಿ ಕಾಂಪೌಂಡ್ ಒಳ ಭಾಗದಲ್ಲಿ ಇಂದು ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಎಸ್ಪಿ ಹನುಮಂತ ರಾಯ, ಎಎಸ್ಪಿ ರಾಜೀವ್, ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗೇಶ್ ಐತಾಳ್, ಮಾರ್ಗದರ್ಶನದಲ್ಲಿ ದಕ್ಷಿಣ ವೃತ್ತ ಸಿಪಿಐ ಗುರುಬಸವರಾಜ, ಕೆಟಿಜೆ ನಗರ ಪೊಲೀಸ್ ಠಾಣೆ ಪಿಎಸ್‍ಐ ಅಬ್ದುಲ್ ಖಾದರ್ ಜಿಲಾನಿ ಮತ್ತು ಸಿಬ್ಬಂದಿ ಗಳಾದ ರವೀಂದ್ರ ಕಾಲ ಭೈರವ, ತಿಪ್ಪೇಸ್ವಾಮಿ, ಲೋಕಾನಾಯ್ಕ, ಬಿ.ಆರ್. ರವಿ ಒಳಗೊಂಡ ತಂಡವು ದಾಳಿ ಮಾಡಿದೆ.

ಚನ್ನಗಿರಿ ಬಳಿಯ ಮಲಹಾಳ್ ಗ್ರಾಮದ ಮೋಹನ್ ಕುಮಾರ್‌ ಎಂಬಾತನಿಂದ ಗಾಂಜಾ ತಂದು ಬಂಧಿತ ಕಿರಣ  ಮನೆಯಲ್ಲಿಟ್ಟು ಪ್ಯಾಕೆಟ್ ಮಾಡಿ ಮಾರುತ್ತಿರುವುದಾಗಿ ಬಂಧಿತರು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಗಾಂಜಾ ಸೊಪ್ಪು ನೀಡುತ್ತಿದ್ದ ಮೋಹನ ಕುಮಾರನ ಬಂಧನಕ್ಕೆ ಬಲೆ ಬೀಸಲಾಗಿದ್ದು, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!