ದೇವರಬೆಳಕೆರೆ: ಗಮನ ಸೆಳೆದ ಪವಾಡಗಳು

ಮಲೇಬೆನ್ನೂರು, ಮಾ.4 – ದೇವರಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಗುರುವಾರ ಸಾಂಯಕಾಲ ಕಾಲಶಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ಎಲ್ಲರ ಗಮನ ಸೆಳೆದವು.

ಗೊರವಪ್ಪನವರು ನಡೆಸಿಕೊಟ್ಟ ಪವಾಡಗಳ ವೀಕ್ಷಣೆಗೆ ಸಾವಿರಾರು ಜನ ಆಗಮಿಸಿದ್ದರು. ಸಂಜೆ  ಓಕುಳಿಯೊಂ ದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ಬುಧವಾರ ಮತ್ತು ಗುರುವಾರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

error: Content is protected !!