ಅನೈತಿಕ ಸಂಬಂಧವಿದ್ದ ಮಹಿಳೆಯ ಕೊಲೆ : ಆರೋಪಿ ಬಂಧನ

ದಾವಣಗೆರೆ, ಏ.28- ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಶೀಲವನ್ನು ಶಂಕಿಸಿ ಕೊಲೆಗೈದ ಆರೋಪಿತನನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲ್ಲೂಕು ಮಾವಿನಕಟ್ಟೆ ಗ್ರಾಮದ ಗಾರೆ ಕೆಲಸಗಾರ ವೆಂಕಟೇಶ್ ಬಂಧಿತನು.  ಹೊನ್ನಾಳಿ ತಾಲ್ಲೂಕು ನೀಲಾಪುರ ಗ್ರಾಮದ ವಸಂತಬಾಯಿ (30) ಹತ್ಯೆಯಾದ ಪ್ರೇಯಸಿ.

ಚನ್ನಗಿರಿ ತಾಲ್ಲೂಕು ಅಜ್ಜಿಹಳ್ಳಿ ಗ್ರಾಮದ ನಾಗರಾಜ ಎಂಬಾತ ತನ್ನ ತೋಟಕ್ಕೆ ಬಂದಾಗ ತೋಟದಿಂದ ಸುಮಾರು 100 ಅಡಿಯಲ್ಲಿ ವಸಂತಬಾಯಿ ಶವ ಪತ್ತೆಯಾಗಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿ ಪತ್ತೆಗೆ ಎಸ್ಪಿ ಹನುಮಂತರಾಯ ಮತ್ತು ಎಎಸ್ಪಿ ಎಂ. ರಾಜೀವ್, ಚನ್ನಗಿರಿ ಉಪವಿಭಾಗದ ಉಪಾಧೀಕ್ಷಕ ಕೆ.ಎಂ. ಸಂತೋಷ್ ಮಾರ್ಗದರ್ಶನದಲ್ಲಿ ಚನ್ನಗಿರಿ ಸಿಪಿಐ ಪಿ.ಬಿ. ಮಧು ನೇತೃತ್ವದಲ್ಲಿ ಚನ್ನಗಿರಿ ಪಿಎಸ್ ಐಗಳಾದ ಜಗದೀಶ್ ಮತ್ತು ರೂಪ್ಲಿಬಾಯಿ ಮತ್ತು  ಸಿಬ್ಬಂದಿಗಳಾದ ರುದ್ರೇಶ್, ಮೊಹಮ್ಮದ್ ಖಾನ್, ಅರುಣ್ ಕುಮಾರ್, ಶ್ರೀನಿವಾಸಮೂರ್ತಿ, ಪರಶುರಾಮ್, ರೇವಣಸಿದ್ದಪ್ಪ ಒಳಗೊಂಡ ತಂಡ ಇಂದು ಆರೋಪಿ ವೆಂಕಟೇಶ್ ನನ್ನು ಬಂಧಿಸಿದ್ದಾರೆ. 

error: Content is protected !!