ಟಿಪ್ಪರ್ ಲಾರಿ ಡಿಕ್ಕಿ: ಮಹಿಳೆ ಸಾವು

ದಾವಣಗೆರೆ, ಮಾ.2- ತನ್ನ ತಾಯಿ ಮತ್ತು ಮಗಳ ಸಹಿತ ಸಾಗುತ್ತಿದ್ದ ಶುಶ್ರೂಷಕರೋರ್ವರ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಶುಶ್ರೂಷಕನ ತಾಯಿ ಮೃತಪಟ್ಟಿರುವ ಘಟನೆ ಇಲ್ಲಿನ ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಂಜನೇಯ ಬಡಾವಣೆಯ ಶುಶ್ರೂಷಕ ಎಂ.ವಿ. ಸತ್ಯನಾರಾಯಣ ಅವರ ತಾಯಿ ಎಂ.ವಿ. ಗಿರಿಜಮ್ಮ  ಮೃತ ದುರ್ದೈವಿ. ಸೋಮವಾರ ಸಂಜೆ ಗಾಂಧಿ ವೃತ್ತದಿಂದ ಪಿ.ಜೆ. ಕ್ರಾಸ್ ಕಡೆಗೆ ಪಾಲಿಕೆ ಮುಂದಿನ ಹಳೆ ಪಿಬಿ ರಸ್ತೆ ಮಾರ್ಗವಾಗಿ ದ್ವಿಚಕ್ರ ವಾಹನದಲ್ಲಿ ಸತ್ಯನಾರಾಯಣ ತಾಯಿ ಮತ್ತು ಮಗಳು ಸಾಯಿ ಚಿನ್ಮಯಿಯೊಂದಿಗೆ ಸಾಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿಪಡಿಸಿದೆ. ಪರಿಣಾಮ ಮೂವರು ರಸ್ತೆ ಮೇಲೆ ಬಿದ್ದಿದ್ದು, ತಕ್ಷಣವೇ ಸಾರ್ವಜನಿಕರು ನೆರವಿಗೆ ಧಾವಿಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಗಿರಿಜಮ್ಮ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.

error: Content is protected !!